ಗುರುವಾರ, ನವೆಂಬರ್ 4, 2010

ಸಿರಿಗನ್ನಡಂ ಗಲ್ಲಿಗೆ ಆಗುವ ಮುನ್ನ.....

ಸಿರಿಗನ್ನಡಂ ಗಲ್ಲಿಗೆ ಆಗುವ ಮುನ್ನ.....

ಹಾತ್ಮೀಯ ಕನ್ನಡ ಕುಲ ಬಾಂಧವರೆ,
ಮತ್ತೊಂದು ದ್ದೂರಿ ಕನ್ನಡ ರಾಜ್ಯೋತ್ಸವ ಇತಿಹಾಸದ ಪುಟ ಸೇರಿದೆ. ನವೆಂಬರ್ ಒಂದು ತೆರೆ ಮರೆಗೆ ಸಂದರೂ ಕನ್ನಡಮ್ಮನ ಕುಲಪುತ್ರರೆಂದು ಕರೆದುಕೊಳ್ಳುವ ತಥಾಕಥಿತ ಕನ್ನಡದ ಟ್ಟು (ಹಾ)ರಾಟಗಾರರಿಗೆ ತಿಂಗಳಿಡೀ ಬಿಡುವಿರದಷ್ಟು ಕನ್ನಡ ಕೆಲಸ. ಇಂತಹ ಸಂದರ್ಭದಲ್ಲಿ ಆ ಕನ್ನಡಮ್ಮನ ಗೋಳು ಯಾವ ದೇವರಿಗೆ ಕೇಳಿಸೀತು ಅಲ್ಲವೇ? ಈ ಸಿಡಿಲಬ್ಬರಗಳ ಮಧ್ಯೆಯೂ ನಮ್ಮ ಕನ್ನಡ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ನಾನು ಕ್ಲಿಕ್ಕಿಸಿದ ಈ ಛಾಯಾಚಿತ್ರಗಳೇ ಸಾಕ್ಷಿ.. ನೂರು ಪುಟಗಳಷ್ಟು ಬರಹ ಹೇಳುವುದನ್ನು ಒಂದು ಛಾಯಾಚಿತ್ರ ಹೇಳುತ್ತದೆ ಎಂಬುದು ಬಲ್ಲವರ ಮಾತು. ಹಾಗಾಗಿ ಈ ಚಿತ್ರಗಳ ಪೂರ್ವಾಪರಗಳ ಕುರಿತು ಏನೂ ಬರೆಯದೆ ಫೋಟೊ ಮಾತ್ರ ಅಪ್ಲೋಡ್ ಮಾಡಿದ್ದೇನೆ. ಮುಂದಿನದೆಲ್ಲಾ ನಿಮ್ಮ ಚಿತ್ತದೃಷ್ಠಿಗೆ ಬಿಟ್ಟಿದ್ದು....




ಝೈ ಕನ್ನಡಾಂಭೆ..!!!!

ವೃವಸ್ಥಾಪಕರೋ ವ್ಯವಸ್ಥಾಪಕರೋ..!!??


ಸರಿ : ಸಿರಿ ಕೇಕ್ ಕಾರ್ನರ್..!!
ನೋಡಿ ಸ್ವಾಮಿ ಬೋರ್ಡ್ ಇರೋದೇ ಹೀಗೆ..!!! (ಬೋರ್ಡುನೋಡಿ ಕೊರಗಬೇಡಿರಿ ಕೆಟ್ಟ ಯೋಚನೆ ಮಾಡಬೇಡಿರಿ..!!)