tag:blogger.com,1999:blog-2179240851750024712024-03-12T19:59:45.814-07:00ಇಂಚರಮಾತು ಮೌನಗಳ ನಡುವೆ ದೂರ ತೀರದ ಯಾನರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.comBlogger14125tag:blogger.com,1999:blog-217924085175002471.post-1630083550231464922010-11-04T03:03:00.008-07:002010-11-04T03:29:03.391-07:00ಸಿರಿಗನ್ನಡಂ ಗಲ್ಲಿಗೆ ಆಗುವ ಮುನ್ನ.....<span style="COLOR: rgb(255,102,0);font-size:130%;" ><span style="FONT-WEIGHT: bold">ಸಿರಿಗನ್ನಡಂ ಗಲ್ಲಿಗೆ ಆಗುವ ಮುನ್ನ.....</span></span><br /><p><span style="font-size:130%;"><span style="COLOR: rgb(255,102,102)">ಹಾ</span>ತ್ಮೀಯ ಕನ್ನಡ ಕುಲ ಬಾಂಧವರೆ,<br />ಮತ್ತೊಂದು <span style="COLOR: rgb(255,0,0)">ಹ</span>ದ್ದೂರಿ ಕನ್ನಡ ರಾಜ್ಯೋತ್ಸವ ಇತಿಹಾಸದ ಪುಟ ಸೇರಿದೆ. ನವೆಂಬರ್ ಒಂದು ತೆರೆ ಮರೆಗೆ ಸಂದರೂ ಕನ್ನಡಮ್ಮನ ಕುಲಪುತ್ರರೆಂದು ಕರೆದುಕೊಳ್ಳುವ ತಥಾಕಥಿತ ಕನ್ನಡದ <span style="COLOR: rgb(255,0,0)">ಉ</span>ಟ್ಟು <span style="COLOR: rgb(255,0,0)">ಓ</span>(ಹಾ)ರಾಟಗಾರರಿಗೆ ತಿಂಗಳಿಡೀ ಬಿಡುವಿರದಷ್ಟು ಕನ್ನಡ ಕೆಲಸ. ಇಂತಹ ಸಂದರ್ಭದಲ್ಲಿ ಆ ಕನ್ನಡಮ್ಮನ ಗೋಳು ಯಾವ ದೇವರಿಗೆ ಕೇಳಿಸೀತು ಅಲ್ಲವೇ? ಈ ಸಿಡಿಲಬ್ಬರಗಳ ಮಧ್ಯೆಯೂ ನಮ್ಮ ಕನ್ನಡ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ನಾನು ಕ್ಲಿಕ್ಕಿಸಿದ ಈ ಛಾಯಾಚಿತ್ರಗಳೇ ಸಾಕ್ಷಿ.. ನೂರು ಪುಟಗಳಷ್ಟು ಬರಹ ಹೇಳುವುದನ್ನು ಒಂದು ಛಾಯಾಚಿತ್ರ ಹೇಳುತ್ತದೆ ಎಂಬುದು ಬಲ್ಲವರ ಮಾತು. ಹಾಗಾಗಿ ಈ ಚಿತ್ರಗಳ ಪೂರ್ವಾಪರಗಳ ಕುರಿತು ಏನೂ ಬರೆಯದೆ ಫೋಟೊ ಮಾತ್ರ ಅಪ್ಲೋಡ್ ಮಾಡಿದ್ದೇನೆ. ಮುಂದಿನದೆಲ್ಲಾ ನಿಮ್ಮ ಚಿತ್ತದೃಷ್ಠಿಗೆ ಬಿಟ್ಟಿದ್ದು....</span><br /><br /><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEj_xthnDYUJpbJ2FkgkzNz-yxt1R07I4RlIiTd2VsbDZw6xffix64E6MTbUphZbaeEpTiQOksoRPu7I9YlR8yxXsv-qMAncZ_YgBIvMJuNa9UrGNaFfQgqLRt0sfMasnTROMhxeBAUPwrAh/s1600/Photo0155.jpg"><img id="BLOGGER_PHOTO_ID_5535633146434931810" style="DISPLAY: block; MARGIN: 0px auto 10px; WIDTH: 400px; CURSOR: pointer; HEIGHT: 173px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEj_xthnDYUJpbJ2FkgkzNz-yxt1R07I4RlIiTd2VsbDZw6xffix64E6MTbUphZbaeEpTiQOksoRPu7I9YlR8yxXsv-qMAncZ_YgBIvMJuNa9UrGNaFfQgqLRt0sfMasnTROMhxeBAUPwrAh/s400/Photo0155.jpg" border="0" /></a></p><br /><p><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjk4yCpprcqkFt7Dk5gPiVqfFCF2Lqb3Jkc7ssbBru4sLWmxAnc71JHN9iZg9ejoFWQOI4uXorSXDthMze6MZ4YV2Wk-e7qZPuL1j6XwuMI8kdXtbDVrNva7JNmykar8xrEK-HCcVuBNu3_/s1600/Photo0157.jpg"><img id="BLOGGER_PHOTO_ID_5535633585389444594" style="DISPLAY: block; MARGIN: 0px auto 10px; WIDTH: 400px; CURSOR: pointer; HEIGHT: 98px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjk4yCpprcqkFt7Dk5gPiVqfFCF2Lqb3Jkc7ssbBru4sLWmxAnc71JHN9iZg9ejoFWQOI4uXorSXDthMze6MZ4YV2Wk-e7qZPuL1j6XwuMI8kdXtbDVrNva7JNmykar8xrEK-HCcVuBNu3_/s400/Photo0157.jpg" border="0" /></a></p><div style="TEXT-ALIGN: center"><span style="FONT-WEIGHT: bold;font-size:130%;" >ಝೈ ಕನ್ನಡಾಂಭೆ..!!!!</span><br /></div><span style="FONT-WEIGHT: bold;font-size:130%;" ><br /></span><div style="TEXT-ALIGN: center"><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhxsiwO4_uQ7qHWV8gt325K01SJgPqpNUoa3cSgnXC3fuuYiBqfEkT0bPQKhlYXfF4p3pYG3krbZxDImBRE3E2HvIFS-xr-oIGG9xiryrUV38ayEiPScla1mLwgoWuUhfbdKexMvryW8mSM/s1600/Photo0277.JPG"><img id="BLOGGER_PHOTO_ID_5535634046604689650" style="DISPLAY: block; MARGIN: 0px auto 10px; WIDTH: 400px; CURSOR: pointer; HEIGHT: 108px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEhxsiwO4_uQ7qHWV8gt325K01SJgPqpNUoa3cSgnXC3fuuYiBqfEkT0bPQKhlYXfF4p3pYG3krbZxDImBRE3E2HvIFS-xr-oIGG9xiryrUV38ayEiPScla1mLwgoWuUhfbdKexMvryW8mSM/s400/Photo0277.JPG" border="0" /></a><span style="FONT-WEIGHT: bold"><span style="font-size:130%;">ವೃವಸ್ಥಾಪಕರೋ ವ್ಯವಸ್ಥಾಪಕರೋ..!!??</span> </span></div><div style="TEXT-ALIGN: center"><span style="FONT-WEIGHT: bold"><br /><br /></span><div style="TEXT-ALIGN: center"><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEj9B7h2jtNR-1pT9TIrlEFAoJ1m9K0tW7WE9qIz2Mm7TyyreMPw9iEW1lvLWdNEdqiXg4unnC9ixgiTU_R4j5c4aw9PJde7sTA_0jw3e5uQ1vMyNF_YpeAbZPeicTC46jBhCy4DVL0IwDfx/s1600/Photo0232.jpg"><img id="BLOGGER_PHOTO_ID_5535634383771064466" style="DISPLAY: block; MARGIN: 0px auto 10px; WIDTH: 400px; CURSOR: pointer; HEIGHT: 221px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEj9B7h2jtNR-1pT9TIrlEFAoJ1m9K0tW7WE9qIz2Mm7TyyreMPw9iEW1lvLWdNEdqiXg4unnC9ixgiTU_R4j5c4aw9PJde7sTA_0jw3e5uQ1vMyNF_YpeAbZPeicTC46jBhCy4DVL0IwDfx/s400/Photo0232.jpg" border="0" /></a><span style="FONT-WEIGHT: bold"><span style="font-size:130%;">ಸರಿ : ಸಿರಿ ಕೇಕ್ ಕಾರ್ನರ್..!!</span><br /></span><div style="TEXT-ALIGN: center"><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEi6ZdSPYpD4_OHo-rfZgVrzbCozcOc658MRVbvuVHrdu_p3m9dYN3554v4VgCrTJ4nrciQGLkWh2QGYUMJLtJR1Q0N5VUNp75IzirVVZnQWaXRA4pl1P6b5iG6xemH19oqWtC5lXNyxFCz8/s1600/Photo0368.jpg"><img id="BLOGGER_PHOTO_ID_5535634890535568482" style="DISPLAY: block; MARGIN: 0px auto 10px; WIDTH: 400px; CURSOR: pointer; HEIGHT: 273px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEi6ZdSPYpD4_OHo-rfZgVrzbCozcOc658MRVbvuVHrdu_p3m9dYN3554v4VgCrTJ4nrciQGLkWh2QGYUMJLtJR1Q0N5VUNp75IzirVVZnQWaXRA4pl1P6b5iG6xemH19oqWtC5lXNyxFCz8/s400/Photo0368.jpg" border="0" /></a><span style="font-size:130%;"><span style="FONT-WEIGHT: bold">ನೋಡಿ ಸ್ವಾಮಿ ಬೋರ್ಡ್ ಇರೋದೇ ಹೀಗೆ..!!! (ಬೋರ್ಡುನೋಡಿ ಕೊರಗಬೇಡಿರಿ ಕೆಟ್ಟ ಯೋಚನೆ ಮಾಡಬೇಡಿರಿ..!!)</span><br /></span></div></div></div><p><br /></p>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com1tag:blogger.com,1999:blog-217924085175002471.post-2855452133743855132010-08-26T02:05:00.019-07:002010-08-26T04:02:21.337-07:00ಬಹುದಿನಗಳ ನಂತರ ಬ್ಲಾಗಂಗಳಕ್ಕೆ ಮರಳಿ<div align="justify"><span style="font-size:130%;">ಇವತ್ತು... ನಾಳೆ ಬ್ಲಾಗ್ ಅಪ್ ಡೇಟ್ ಮಾಡಬೇಕು.. ಎಂದುಕೊಳ್ಳುತ್ತಲೇ ವರ್ಷ ಕಳೆದುಹೋದರೂ 'ಜಡಭರತ' ಮನಸ್ಸಿನ ಮುನಿಸಿನಿಂದ ಸಾಧ್ಯವಾಗಲೇ ಇಲ್ಲ. ಈ ನಡುವೆ ಪರಿಚಯಸ್ಥ ಅಭಿಮಾನಿ(ನಿ)ಯೊಬ್ಬರು ನನ್ನ ಬ್ಲಾಗಿನ ಬರಹಗಳನ್ನು ಓದಿ 'ಫ್ಯಾನ್' ಆಗಿ ಅಭಿನಂದನೆ ಹೇಳಲು ಫೋನ್ ಮಾಡಿದ್ದರು. ಅದೇ ಹೊತ್ತಿಗೆ ನನ್ನ ಫೋನು, ಇಂಟರ್ನೆಟ್ಟು ಎಲ್ಲ ಕೆಟ್ಟು ಕೆರ ಹಿಡಿದಿದ್ದರಿಂದ 'ಈ ಬಿಎಸ್ಸೆನ್ನೆಲ್ಲಿನವರು ಎದುರಿಗೆ ಸಿಕ್ಕರೆ ಹಿಡ್ಕಂಡು ಸಮಾ ನಾಲ್ಕು ತದುಕಬೇಕು'ಎಂಬಷ್ಟು ಜಮದಗ್ನಿಯ ಅಪರಾವತಾರ ತಾಳಿದ್ದ ನಾನು ಅವರ ಕರೆಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗಲಿಲ್ಲ. ಇದರಿಂದ ಆರಂಭದಲ್ಲಿ 'ಖೈತಾನ್ 'ಫ್ಯಾನ್' ವೇಗದಲ್ಲಿ ಹೊರಡುತ್ತಿದ್ದ ಅವರ ಧ್ವನಿ ಕಡೆಕಡೆಗೆ 1947 ಮಾಡೆಲ್ ಉಷಾ ಫ್ಯಾನ್ ವೇಗಕ್ಕೆ ಬಂದು ಬೇಸರದಲ್ಲೇ ಫೋನ್ ಕುಕ್ಕಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಾನು 'ಸಾರಿ' ಕೇಳಿದೆನಾದರೂ ಅವರು 'ಓಕೆ ರೀ..' ಎಂದ ಪರಿ ನನಗೆ ಸರಿಬರದಿದ್ದರಿಂದ ಬ್ಲಾಗಂಗಳದಲ್ಲೇ ಮತ್ತೊಮ್ಮೆ ಅವರಿಗೆ 'ಸಾರಿ..' ಎನ್ನುತ್ತಾ ಬಹುದಿನಗಳ ನಂತರ ಹೊಸ ಬರಹವೊಂದನ್ನು ಹಾಕಿದ್ದೇನೆ ಓದಬರುವವರಿಗೆಲ್ಲ ಸ್ವಾಗತ </span></div><div align="justify"><span style="font-size:130%;"></span><br /></div><div align="justify"><br /></div><div align="justify"><strong><span style="font-size:180%;color:#993300;">ಬರಿದಾದ ಮನೆಬೆಳಕೆ ನೀನೆಂದು ಬರುವೆ...?</span></strong><br /><br /><span style="font-size:130%;"><strong><span style="color:#3366ff;">ನಾಕಲೋಕದ ನಕ್ಷತ್ರವೇ,</span> </strong></span><br /><br /><span style="font-size:130%;"><span style="color:#444444;">ಮೊನ್ನೆ ಸಂಭ್ರಮದ ರಕ್ಷಾಬಂಧನ. ಗೆಳೆಯರೆಲ್ಲ ಅಕ್ಕತಂಗಿಯರಿಂದ ರಾಖಿ ಕಟ್ಟಿಸಕೊಂಡು ಸಂಭ್ರಮಿಸುತ್ತಿದ್ದರು. ಆ ಕ್ಷಣಕ್ಕೆ ನೆನಪಾದವಳು ನೀನು. ಎಲ್ಲ ಸುಸೂತ್ರವಾಗಿದ್ದಿದ್ದರೆ ನಾನೂ ನಿನ್ನ ಕೈಲಿ ರಾಖಿ ಕಟ್ಟಿಸಿಕೊಂಡು 'ಅಣ್ಣ'ನೆಂಬ ಹೆಮ್ಮೆಯಲ್ಲಿ ಬೀಗುತ್ತಿರುತ್ತಿದ್ದೆ. ಆದರೆ ದೈವಚಿತ್ತವೇ ಹಾಗಿತ್ತೇನೋ? ಉಸಿರು ಹಸಿರಾಗಿ ಚಿಗುರುವ ಮುನ್ನವೇ ನೀನು ಕಾಣದೂರಿಗೆ ಹೊರಟುಹೋದೆ. ಓರಗೆಯ ತಂಗಿಯರು, ದೊಡ್ಡಮ್ಮನ ಮಕ್ಕಳು ರಾಖಿ ಕಟ್ಟಿ ಶುಭ ಹಾರೈಸಿದರಾದರೂ ಬೆನ್ನಿಗೆ ಹುಟ್ಟಿದ ತಂಗಿಯಿಂದ ರಾಖಿ ಕಟ್ಟಿಸಿಕೊಂಡು ಗಿಫ್ಟಿಗಾಗಿ ನೀನು ಗೋಳುಹುಯ್ದುಕೊಳ್ಳುವುದನ್ನು ಕಂಡು ಒಳಗೊಳಗೇ ಖುಷಿ ಪಡುವ, ದುಡ್ಡೋ ಗಿಫ್ಟೋ ಕೊಟ್ಟಾಗ ನೀನು ಕುಣಿದಾಡುವ ಕ್ಷಣದ ಸಂತೋಷವೇ ಬೇರೆ. ಆ ವಿಷಯದಲ್ಲಿ ನಾನು ಪರ್ಮನೆಂಟ್ ದುರದೃಷ್ಟವಂತ<strong>!</strong></span> </span></div><div align="justify"><span style="font-size:130%;"></span></div><div align="justify"><span style="font-size:130%;"></span></div><div align="justify"><span style="font-size:130%;"></div></span><div align="justify"><div class="separator" style="CLEAR: both; TEXT-ALIGN: center"><a style="MARGIN-LEFT: 1em; MARGIN-RIGHT: 1em" href="https://blogger.googleusercontent.com/img/b/R29vZ2xl/AVvXsEgto0xBmXfB7t55ffQmavGCsdB5HBwP8bFHGebzIWsB7D_jY7iiLdCERHJ40sv7kwtMSKFYCLYrTCpJQ8bhX5shyphenhyphenCE_W6LsKnim_1-MKAipNv1QXGy8820E6IC2896YB1u6UKWZnB5ynw5i/s1600/raksha-bandhan.jpg" imageanchor="1"><span style="font-size:130%;color:#444444;"><img style="WIDTH: 362px; HEIGHT: 314px" height="320" src="https://blogger.googleusercontent.com/img/b/R29vZ2xl/AVvXsEgto0xBmXfB7t55ffQmavGCsdB5HBwP8bFHGebzIWsB7D_jY7iiLdCERHJ40sv7kwtMSKFYCLYrTCpJQ8bhX5shyphenhyphenCE_W6LsKnim_1-MKAipNv1QXGy8820E6IC2896YB1u6UKWZnB5ynw5i/s320/raksha-bandhan.jpg" width="253" border="0" ox="true" /></span></a> </div><div class="separator" style="CLEAR: both; TEXT-ALIGN: center"></div><div class="separator" style="CLEAR: both; TEXT-ALIGN: center"></div><div class="separator" style="CLEAR: both; TEXT-ALIGN: center"></div><div class="separator" style="CLEAR: both; TEXT-ALIGN: center"></div><div class="separator" style="CLEAR: both; TEXT-ALIGN: center"><span style="font-size:130%;"></span></div></div><div align="justify"><strong><span style="font-size:130%;"></span></strong></div><div align="justify"><strong><span style="font-size:130%;"></span></strong></div><div align="justify"><span style="font-size:130%;">ನಾವು ಗಂಡು ಹುಡುಗರು 'ತಮ್ಮ' ಎನಿಸಿಕೊಳ್ಳುವುದಕ್ಕಿಂತ 'ಅಣ್ಣ' ಎನಿಸಿಕೊಳ್ಳುವುದಕ್ಕೇ ಹೆಚ್ಚು ಇಷ್ಟಪಡುತ್ತೇವೆ. ಕಾರಣ ಇಷ್ಟೆ: ತಮ್ಮನಾದರೆ, ನೀವು ಮೊದಲೇ ಫೀಲ್ಡಿಗೆ ಕಾಲಿಟ್ಟ ಅಕ್ಕಂದಿರು ನಮ್ಮ ರೆಕ್ಕೆಪುಕ್ಕಗಳನ್ನೆಲ್ಲ ಕತ್ತರಿಸಿ ನಮ್ಮ ಜುಟ್ಟು ಕೈಲಿಟ್ಟುಕೊಂಡು ಆಟ ಆಡಿಸಿಬಿಡುತ್ತೀರಿ! ಹಾಗಾಗಿ ನಮಗೆ ಅಣ್ಣನಾಗುವುದೇ ಹೆಚ್ಚು ಇಷ್ಟ. ತಪ್ಪಿಹೋದದ್ದು ಅಣ್ಣನೆಂಬ ಚಿಕ್ಕ ಪದವಿಯಾದರೂ ಅದರಿಂದ ಎಷ್ಟೆಲ್ಲ ಸಣ್ಣಸಣ್ಣ ಸಂತೋಷಗಳು ಇಲ್ಲವಾದವು ಎಂಬುದನ್ನು ನೆನೆಸಿಕೊಂಡರೆ ಇವತ್ತಿಗೂ ದುಃಖವಾಗುತ್ತದೆ. ನಿನ್ನನ್ನು ಶಾಲೆಗೆ ಕರೆದೊಯ್ಯುವುದರಿಂದ ಹಿಡಿದು ಜಾತ್ರೆಯಲ್ಲಿ ಬಳೆ, ರಿಬ್ಬನ್ನು ಕೊಡಿಸುವ, ಡ್ರೆಸ್ ಕೊಡಿಸುವ ಕೊನೆಗೆ ಒಬ್ಬ ವರ ಮಹಾಶಯನಿಗೆ ನಿನ್ನನ್ನು ಒಪ್ಪಿಸಿ ಭಾವನೆನ್ನಿಸಿಕೊಳ್ಳುವ ವರೆಗೆ ಯಾವ ಸಂತೋಷವನ್ನೂ ಈ ಜನ್ಮದಲ್ಲಿ ಅನುಭವಿಸಲಾಗದವನು ನಾನು.<br /><br /></span></div><div align="justify"><span style="font-size:130%;"></span></div><div align="justify"><span style="font-size:130%;"></span></div><div align="justify"><span style="font-size:130%;">ಒಮ್ಮೊಮ್ಮೆ ನನ್ನ ಹುಡುಗಾಟ ಮಿತಿಮೀರಿದಾಗಲೋ, ಅವರಿವರ ಹೆಣ್ಣುಮಕ್ಕಳ ವಿಷಯ ಬಂದಾಗಲೋ ಅಮ್ಮ 'ಅವಳಿದ್ದಿದ್ದರೆ ಇಷ್ಟರಲ್ಲೇ ಒಂದು ಗುಂಡು ಹುಡುಕಲು ಶುರುಮಾಡಬೇಕಿತ್ತು ಆಗ ನಿನಗೆ ಸ್ವಲ್ಪ ಜವಾಬ್ದಾರಿ ಬರುತ್ತಿತ್ತು' ಎನ್ನುತ್ತಿರುತ್ತಾಳೆ. ಆಗೆಲ್ಲ ನಾನು 'ಈಗ ಮೀಸೆಗಿಂತ ಜಡೆಗೇ ಜಾಸ್ತಿ ಡಿಮ್ಯಾಂಡ್ ಇರುವಾಗ 'ವರ'ಗಳಿಗೇನೂ ಬರ ಇರಲಿಲ್ಲ. ಸರಿಯಾದವನನ್ನೇ ಹುಡುಕಿ ಜೋಡಿ ಮಾಡುತ್ತಿದ್ದೆ' ಎನ್ನುತ್ತಿರುತ್ತೇನೆ. ಕೆಲವು ಗಂಟೆಗಳ ಇಷ್ಟು ಸಂತೋಷವನ್ನು ತಂದವಳು ನೀನು, ಇನ್ನು ಇಡೀ ಬದುಕಿನುದ್ದಕ್ಕೂ ಇದ್ದಿದ್ದರೆ ಹುಟ್ಟಿದ ಮನೆಗೂ ಕೊಟ್ಟ ಮನೆಗೂ ನಿಜವಾದ ಮನೆಬೆಳಕೇ ಆಗಿರುತ್ತಿದ್ದೆಯೇನೋ!? ಆ ಭಾಗ್ಯ ನಮಗಿಲ್ಲ ಅಷ್ಟೆ. ನಮ್ಮೊಡನೆ ಇಲ್ಲದಿದ್ದರೂ ಎಲ್ಲೋ ಒಂದೆಡೆ ಮತ್ತೆ ಉಸಿರೊಡೆದು ಹಸಿರಾಗಿ ಮನೆಮಂದಿಗೆಲ್ಲ ತಂಪು ನೀಡುತ್ತಿದ್ದೀಯ ಎಂಬ ನಂಬಿಕೆ ನನ್ನದು. ನೀನೆಲ್ಲೇ ಇದ್ದರೂ ನಿನ್ನ ಉಸಿರಿನಿಂದ ಒಡಮೂಡಿದ ಆ ಜೀವ ತಣ್ಣಗಿರಲಿ. </span></div><div align="justify"><span style="font-size:130%;"><span style="color:#444444;"></span><br /></span></div><div align="justify"><span style="font-size:130%;">ಇಂತಿ,<br /></span></div><div align="justify"><span style="font-size:130%;">ನಿನ್ನ ಅಣ್ಣ</span></div>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com5tag:blogger.com,1999:blog-217924085175002471.post-24638749804902165002009-03-25T22:39:00.002-07:002009-03-25T22:48:01.207-07:00ಸುಶಿಕ್ಷಿತನ ಸಣ್ಣತನ<span style="font-size:130%;"><span style="color:#000099;"><strong>ಇ</strong>ತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ನಡೆದ ಘಟನೆ. ಸಿಟಿ ಬಸ್ಸಿಗೆ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಸಮೀಪವೇ ಇದ್ದ ಸಣ್ಣ ಮೈದಾನದಲ್ಲಿ ಮಕ್ಕಳ ಗುಂಪೊಂದು ಕ್ರಿಕೆಟ್ ಆಡುತ್ತಿತ್ತು. ಒಬ್ಬಾತ ಜೋರಾಗಿ ಹೊಡೆದಾಗ ಬಾಲು ಮೈದಾನವನ್ನು ದಾಟಿ ನನ್ನ ಪಕ್ಕ ನಿಂತಿದ್ದ ಯುವಕನ ಬಳಿ ಬಂದು ಬಿದ್ದಿತು. ಇದನ್ನು ನೋಡಿದ ಮಕ್ಕಳು ಬಾಲ್ ಪಡೆಯಲು ಓಡೋಡಿ ಬಂದವು. </span></span><br /><span style="font-size:130%;"><br /><span style="color:#000099;"><strong>ಅ</strong>ಷ್ಟರಲ್ಲಿ ನಾನು ಹತ್ತಬೇಕಿದ್ದ ಬಸ್ ಬಂದಿದ್ದರಿಂದ ನನ್ನ ಗಮನ ಅತ್ತಕಡೆ ಹರಿಯಿತು. ಸುಶಿಕ್ಷಿತನಂತೆ ಕಾಣುತ್ತಿದ್ದ ಆ ಯುವಕ ಅದಾಗಲೇ ಬಾಲ್ ಎತ್ತಿಕೊಂಡವನು ಮಕ್ಕಳಿಗೆ ಅದನ್ನು ಹಿಂದಿರುಗಿಸದೆ ಮುಷ್ಟಿಯಲ್ಲಿ ಹಿಡಿದುಕೊಂಡು ಬಸ್ಸೇರಿ ಕುಳಿತುಕೊಂಡಿದ್ದ. ಮಕ್ಕಳು ಬಸ್ ಬಳಿ ಬಂದು ಬಾಲ್ ನೀಡುವಂತೆ ಅಂಗಲಾಚತೊಡಗಿದರು. ಆದರೂ ಈತ ತನಗೇನೂ ಗೊತ್ತಿಲ್ಲವೆಂಬಂತೆ ಮಿಣ್ಣಗೆ ಕುಳಿತುಕೊಂಡಿದ್ದ. ಬಾಲ್ ಇವನ ಬಳಿಯೇ ಇದೆ ಎಂದು ಗೊತ್ತಾಗಿದ್ದ ಆ ಮಕ್ಕಳ ಮುಖ ಅಸಹಾಯಕತೆಯಿಂದ ಕ್ಷಣಕ್ಷಣಕ್ಕೂ ಸಣ್ಣದಾಗತೊಡಗಿತು. </span><br /><br /><span style="color:#000099;"><strong>ಇ</strong>ದನ್ನು ನೋಡಿದ ನಾವೆಲ್ಲ ಆ ಯುವಕನತ್ತ ಇರಿಯುವ ನೋಟ ಬೀರಿದರೂ ಆತನ ಆನೆ ಚರ್ಮಕ್ಕೆ ಅದು ನಾಟಲೇ ಇಲ್ಲ! ಬಸ್ಸಿನಲ್ಲಿದ್ದ ಹಿರಿಯರೊಬ್ಬರು ಮನಸ್ಸು ತಡೆಯಲಾರದೆ ‘ಪಾಪ ಆ ಮಕ್ಕಳ ಚೆಂಡನ್ನು ಯಾಕೆ ಕಿತ್ಕೋತೀರ್ರೀ; ವಾಪಸ್ ಕೊಡಿ.’ ಎಂದು ಹೇಳಿದರಾದರೂ ಆತ ಜಾಣ ಕಿವುಡನಂತೆ ಕಿಟಕಿಯತ್ತ ಮುಖ ಹೊರಳಿಸಿದ.</span><br /><br /><span style="color:#000099;"><strong>ಬ</strong>ಸ್ಸು ನಿಧಾನವಾಗಿ ಮುಂದೆ ಚಲಿಸಲಾರಂಭಿಸಿತು. ಮಕ್ಕಳು ಅಂಗಲಾಚುತ್ತಲೇ ಕೆಲ ಹೆಜ್ಜೆ ಹಿಂಬಾಲಿಸಿದರು. ಬಸ್ಸು ವೇಗ ಹೆಚ್ಚಿಸಿಕೊಂಡಂತೆ ನಿರಾಶೆಯ ನೋಟ ಬೀರುತ್ತ ಪೆಚ್ಚುಮೋರೆ ಹಾಕಿಕೊಂಡರು. ಯುವಕನ ಮುಖದಲ್ಲಿ ವಿಜಯ(?)ದ ವಿಕೃತ ಸಂತೋಷವೊಂದು ಹುಟ್ಟಿ ಮಾಯವಾಯಿತು.</span><br /><br /><span style="color:#000099;"><strong>ವಿ</strong>ದ್ಯಾವಂತರಾಗಿದ್ದೂ ಅಂಥ ಸಣ್ಣ ಮಕ್ಕಳು ಎಲ್ಲೆಲ್ಲಿಂದಲೋ ಪುಡಡಿಗಾಸು ಕಲೆ ಹಾಕಿ ಆಡಲು ಕೊಂಡುಕೊಂಡಿರುವ ಬಾಲನ್ನೇ ಕಿತ್ತುಕೊಳ್ಳುವ ಸಣ್ಣತನ ತೋರಿಸುವ ಇಂಥವರು ನಾಳೆ ತಮ್ಮ ಮಕ್ಕಳ ಬಾಲ್ಯವನ್ನು ಹೇಗೆ ಹಸನಾಗಿಸಿಯಾರು?</span></span><br /></span>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com10tag:blogger.com,1999:blog-217924085175002471.post-2371924173251516922009-03-12T02:50:00.017-07:002009-03-12T08:48:23.151-07:00ಕಥೆಯಲ್ಲದ ಕಥೆ<div align="center"><span style="font-size:180%;color:#6600cc;"><strong></strong></span></div><div align="center"><span style="color:#6600cc;"></span></div><div align="center"><span style="color:#6600cc;"></span></div><span style="color:#6600cc;"><span style="font-size:130%;"><strong>ಶ್ವಾ</strong>ನ ಸಂರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ಎಂದಿನಂತೆ ತನ್ನ ಫೀಲ್ಡ್ ವರ್ಕ್ ಮುಗಿಸಿ ಸಂಘದ ಕಚೇರಿಗೆ ವಾಪಸಾಗುತ್ತಿದ್ದ. ಸಂಘಕ್ಕೆ ಅಧ್ಯಕ್ಷನಾದಮೇಲೆ ಕೈಗೆತ್ತಿಕೊಂಡ ಮೊದಲ ಕೆಲಸದಲ್ಲೇ ಭಾರೀ ಯಶಸ್ಸು ಸಿಕ್ಕಿದ್ದ ಕಳೆ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ಬೀದಿ ನಾಯಿಗಳನ್ನು ಉಳಿಸಲು ತಾನು ಕೈಗೆತ್ತಿಕೊಂಡ ಚಳುವಳಿ ತಾರಕಕ್ಕೇರಿದ್ದು ಆತನಿಗೆ ವಿಪರೀತ ಸಂತಸ ತಂದಿತ್ತು. ನಗರದಲ್ಲಿ ಬೀದಿ ನಾಯಿಗಳ ಪರವಾಗಿ ಪೋಸ್ಟರ್ , ಕರಪತ್ರಗಳು ಯಥೇಚ್ಚವಾಗಿ ರಾರಾಜಿಸುತ್ತಿದ್ದವು.</span><br /><span style="font-size:130%;"></span><br /><span style="font-size:130%;"><strong>ನಾ</strong>ಗರಾಜನ ಅದೃಷ್ಟವೋ, ಬೀದಿ ನಾಯಿಗಳ ಪುಣ್ಯವೋ ಕಾರ್ಪೋರೇಷನ್ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲುವುದರ ವಿರುದ್ಧ ಈತ ಆರಂಭಿಸಿದ ಹೋ(ಹಾ)ರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುವ ಲಕ್ಷಣ ಕಾಣುತ್ತಿತ್ತು. ಬೀದಿ ನಾಯಿಗಳ ಕಾಟವನ್ನು ಅನುಭವಿಸಿ ಗೊತ್ತಿಲ್ಲದ, ಎತ್ತರದ ಕಾಂಪೋಡಿನ ಮನೆಗಳಲ್ಲಿ ಬೆಚ್ಚಗೆ ಕುಳಿತ ತಥಾಕಥಿತ ಸಮಾಜ ಸೇವಕರು ಈತನಿಗೆ ಕುಳಿತಲ್ಲಿಂದಲೇ ಬಿಸ್ಕೀಟು ಎಸೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಇವನನ್ನು ಛೂ ಬಿಡುತ್ತಿದ್ದರು. ಇದರಿಂದ ಹುರುಪುಗೊಂಡ ನಾಗರಾಜ ಶ್ವಾನೇಶ್ವರನೇ ಸಾಕ್ಷಾತ್ ಮೈಮೇಲೆ ಬಂದಂತೆ ಪಾಲಿಕೆ ಸಿಬ್ಬಂದಿಗಳ ಮೇಲೆ ಏರಿಹೋಗುತ್ತಿದ್ದ. ಅವರಿಗೆ ಬೀದಿ ನಾಯಿಗಳನ್ನು ಸುಧಾರಿಸುವುದಕ್ಕಿಂತ ಇವನನ್ನು ಸುಧಾರಿಸುವುದೇ ಯಮ ಕಷ್ಟವಾಗುತ್ತಿತ್ತು.</span><br /><span style="font-size:130%;"></span><br /><span style="font-size:130%;"><strong>ಆ</strong>ವತ್ತೂ ಸಹ ನಗರದ ಬಡಾವಣೆಯೊಂದಕ್ಕೆ ತೆರಳಿ ಬೀದಿ ನಾಯಿಗಳ ಕುರಿತು ಅನುಕಂಪ ಭರಿತ ಭಾಷಣ ಕುಟ್ಟಿ ಬಂದಿದ್ದ. ಕಚೇರಿಗೆ ವಾಪಸಾಗುತ್ತಿದ್ದವನು ಮಾರ್ಗಮಧ್ಯದಲ್ಲಿ ಟಿ ಕುಡಿಯಲೆಂದು ಗಾಡಿ ನಿಲ್ಲಿಸಿದ. ಟೀಗೆ ಆರ್ಡರ್ ಮಾಡಿ ಸ್ಕೂಟರಿನಲ್ಲಿದ್ದ ಪೋಸ್ಟರೊಂದನ್ನು ತೆಗೆದು ಪಕ್ಕದ ಕಾಂಪೋಡಿಗೆ ಅಂಟಿಸುವಷ್ಟರಲ್ಲಿ ಟಿ ಬಂತು. ಭಾಷಣ ಬಿಗಿದ ರಭಸಕ್ಕೆ ಬೆಳಿಗ್ಗೆ ತಿಂದ ತಿಂಡಿ ಕರಗಿ ಕಾಣೆಯಾಗಿದ್ದರಿಂದ ಟಿ ಜೊತೆಗೆ ಎರಡು ಬನ್ಸ್ ತೆಗೆದುಕೊಡು ಟೀ ಹೀರತೊಡಗಿದ.</span><br /><span style="font-size:130%;"></span><br /><span style="font-size:130%;"><strong>ಅ</strong>ದೇ ಹೊತ್ತಿಗೆ ಅಲ್ಲೇ ತಿಪ್ಪಿ ಕೆದರುತ್ತಿದ್ದ ಬಡಕಲು ಬೀದಿ ನಾಯಿಯೊಂದು ನಾಗರಾಜನ ಎದುರಿಗೆ ಪ್ರತ್ಯಕ್ಷವಾಯಿತು. ಮೈಯ ಎಲುಬು ಎಣಿಸಬಹುದಾದಷ್ಟು ಬಡಕಲಾಗಿದ್ದ ಆ ನಾಯಿ ಬನ್ಸ್ ತಿನ್ನುತ್ತಿರುವ ನಾಗರಾಜನನ್ನೇ ನೋಡುತ್ತ ಬಾಲ ಅಲ್ಲಾಡಿಸತೊಡಗಿತು. ಒಮ್ಮೆ ಅದರತ್ತ ದೃಷ್ಟಿ ಹಾಯಿಸಿದ ನಾಗರಾಜ ಕಂಡೂ ಕಾಣದವನಂತೆ ಪಕ್ಕಕ್ಕೆ ತಿರುಗಿ ಚಹಾ ಸೇವನೆ ಮುಂದುವರೆಸಿದ. ಅಷ್ಟರಲ್ಲಿ ಟೀ ಅಂಗಡಿಯವನು ಕುಳಿತಲ್ಲಿಂದಲೇ ಬನ್ನೊಂದನ್ನು ಎಸೆದ. ಒಂದೇ ಗುಕ್ಕಿಗೆ ನಾಯಿ ಅದನ್ನು ತಿಂದು ಮುಗಿಸಿತು. ಅದರ ಹಸಿವು ಹಿಂಗಲಿಲ್ಲವೇನೋ. ಮತ್ತೆ ನಾಗರಾಜನತ್ತ ತಿರುಗಿ ಆಸೆಯಿಂದ ಮಂದ್ರ ಸ್ವರದಲ್ಲಿ ಕುಂಯ್ ಕುಂಯ್ ರಾಗ ಹೊರಡಿಸಿತು.</span><br /><span style="font-size:130%;"></span><br /><span style="font-size:130%;"><strong>ಏ</strong>ನೂ ಪ್ರಯೋಜನವಾಗಲಿಲ್ಲ. ನಾಗರಾಜನ ಕೈಲಿದ್ದ ಎರಡನೇ ಬನ್ಸೂ ಖಾಲಿಯಾಗುತ್ತಾ ಬಂತು.</span><br /><span style="font-size:130%;">ನಿರ್ಲಿಪ್ತ ಮೋರೆಯೊಡನೆ ಪಕ್ಕಕ್ಕೆ ತಿರುಗಿದ ನಾಯಿ ಅಲ್ಲಿ ಇಲ್ಲಿ ಮೂಸಿ ನಾಗರಾಜ ಅಂಟಿಸಿದ್ದ ಪೋಸ್ಟರಿಗೆ ಮೂತ್ರಿಸಿ ಹೊರಟುಹೋಯಿತು. </span><br /><span style="font-size:130%;"></span><br /><span style="font-size:130%;"><strong>ನಾ</strong>ಗರಾಜನ ಮುಖ ಹರಳೆಣ್ಣೆ ಕುಡಿದಂತಾದರೂ ತೋರ್ಪಡಿಸಿಕೊಳ್ಳದೆ ಬಿಲ್ ಕೊಡಲು ಹೊರಳಿದ. ಆಗಲೇ ಅವನಿಗೆ ಟಿ ಅಂಗಡಿಯವ ಈಗ ನಡೆದ ಘಟನೆಗೆ ಮೂರನೇ ಪ್ರೇಕ್ಷಕನಾಗಿದ್ದನೆಂಬ ಅಂಶ ತಿಳಿದದ್ದು.!</span><br /><span style="font-size:130%;">ತಕ್ಷಣ ಸ್ಕೂಟರ್ ಏರಿದವನೇ ಶರವೇಗದಲ್ಲಿ ಅಲ್ಲಿಂದ ಕಾಲ್ಕಿತ್ತ. ಇತ್ತ ನಾಗರಾಜ ಅಂಟಿಸಿದ್ದ ಪೋಸ್ಟರ್ ನಿಧಾನವಾಗಿ ನೆಲಕ್ಕೊರಗಿತು.</span><br /><span style="font-size:130%;"></span></span>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com5tag:blogger.com,1999:blog-217924085175002471.post-29275409493670856452009-01-20T01:07:00.012-08:002009-01-20T02:39:10.475-08:00ಮಾಗಿ ಚಳಿಗೆ ಮೈಯೊಡ್ಡಿ<span style="font-size:130%;color:#000099;"><span style="font-size:180%;">ಮಾ</span>ಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ 'ಮಡಿವಂತ' ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ.</span><br /><br /><br /><span style="font-size:130%;color:#000099;"><span style="font-size:180%;">ಮ</span>ಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.</span><br /><br /><br /><span style="font-size:130%;color:#000099;"><span style="font-size:180%;">ನೀ</span>ವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. "ಶಿವರಾತ್ರಿ ಬಂದಾಗ ಶಿವ ಶಿವಾ.... ಅನ್ನುತ್ತ ಚಳಿ ಓಡಿಹೋಗುತ್ತೆ" ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.</span><br /><span style="font-size:130%;color:#000099;"></span><br /><span style="font-size:130%;color:#000099;"><span style="font-size:180%;">ಮ</span>ಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ - ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. </span><span style="font-size:130%;color:#000099;">ಬಿದ್ದ ಇಬ್ಬನಿಯ ಭಾರ ಕಳೆದು<br /></span><span style="font-size:130%;color:#000099;"><img id="BLOGGER_PHOTO_ID_5293321238576589186" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 293px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEipgdTfnE2qXtniw6bXqZULj8-uLBrR4k2PLSBmEgh_RIOIX9lFSYkcGZDHFBX2LgUBCEEGH9HYrvxSxPU9E-Yyj63QYR2P4NtxTnhgBBsG65PNBO6oKEh_2t6NkAVigp_aadC84SyNZSPM/s400/paddy+feild.jpg" border="0" />ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು. </span><br /><span style="font-size:130%;color:#000099;"></span><br /><div><span style="font-size:130%;color:#000099;"><span style="font-size:180%;">ಬಾ</span>ನಲ್ಲಿ ಬೆಳ್ಳಿ ಕಿರಣ ಮೂಡುತ್ತಿದ್ದಂತೆ ಅಡಿಕೆ ತೋಟಕ್ಕೆ ಹೋದರೆ ಬರಲೋ ಬೇಡವೋ ಎಂಬಂತೆ ಅಡಿಕೆ ಮರದ ಸಂದುಗಳಿಂದ ಇಣುಕುವ ಸೂರ್ಯನನ್ನು ನೋಡುವುದೇ ಚಂದ.ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ. ಬೆಳಗಿನ ತಿರುಗಾಟ, ತಿಂಡಿ ಮುಗಿಸಿ ಹಬೆಯಾಡುವ ಕಾಫಿ ಹೀರುತ್ತ ಅಂಗಳದಲ್ಲಿ ಕೂತು ಬಿಸಿಲಿಗೆ ಬೆನ್ನೊಡ್ಡಿದರೆ ಆಹಾ ಮಹದಾನಂದಂ!! ಗಂಟೆ ಹನ್ನೊಂದಾದರೂ ಬಿಸಿಲೇರಿದ್ದೇ ತಿಳಿಯುವುದಿಲ್ಲ.</span></div><br /><div><span style="font-size:130%;color:#000099;"><span style="font-size:180%;">ಚ</span>ಳಿಗಾಲದಲ್ಲಿ ಸಂಜೆ ನಾಲ್ಕಕ್ಕೇ ಬಿಸಿಲು ತಾಪ ಕಳೆದುಕೊಂಡು ತಣ್ಣಗಾಗಿಬಿಡುತ್ತದೆ. ಮೂರುಸಂಜೆಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿ ಕೈಕಾಲು ತಣ್ಣಗಾಗಿಸಿಬಿಡುತ್ತದೆ. ಆಗ ಕಾವೇರಿಸಲು ಹೊಡಸಲು ಬೆಂಕಿಯೇ ಬೇಕು. ಅಡಿಕೆ ಕೊಯ್ಲು ಈ ಸಮಯದಲ್ಲೇ ನಡೆಯುವುದರಿಂದ ಅಡಿಕೆ ಒಲೆಯ ಬೆಂಕಿಯಲ್ಲಿ ಮೈ ಕಾಯಿಸುವುದೂ ಹಿತವಾಗಿರುತ್ತದೆ. ಅಡಿಕೆ ಒಲೆಯ ಮುಂದೆ ಕೂತು ಅಡಿಕೆ ಸುಲಿಯುವವರು ಹೇಳುವ ಹಾಡು, ಲಾವಣಿ, ತರಹೇವಾರಿ ಕಥೆಗಳನ್ನು ಕೇಳುತ್ತಿದ್ದರೆ ಸಮಯ ತಡರಾತ್ರಿ ತಲುಪಿದ್ದೇ ತಿಳಿಯುವುದಿಲ್ಲ.</span></div><br /><div><span style="font-size:130%;color:#000099;"><span style="font-size:180%;">ಹೀ</span>ಗೆ ಮಲೆನಾಡಿನ ಚಳಿಗಾಲದ ದಿನಚರಿ ಸೊಗಸಾಗಿ ಕಳೆಯುತ್ತದೆ. ಏನೇ ಘನಕಾರ್ಯವಿದ್ದರೂ ಚಳಿಗಾಲದಲ್ಲಿ ಮಲೆನಾಡು ರಾತ್ರಿ ಹತ್ತಕ್ಕೇ ದೀಪವಾರಿಸಿಕೊಂಡು ಸ್ತಬ್ಧವಾಗಿಬಿಡುತ್ತದೆ. ಆಮೇಲಿನ ಸಮಯವೇನಿದ್ದರೂ 'ಅಪ್ಪಿಕೋ' ಚಳುವಳಿಗೆ ಮೀಸಲು.! ಮದುವೆಯಾಗದವರು 'ಒಂದು ಚಳಿಗಾಲ ವ್ಯರ್ಥವಾಯಿತಲ್ಲ' ಎಂದು ಕೊರಗುವುದು ಮಾಮೂಲು. ಹಾಗಿರುತ್ತದೆ ಮಲೆ(ಳೆ)ನಾಡಿನ ಚಳಿಯ ಛಳಕು. ಜೀವನದಲ್ಲೊಮ್ಮೆ ಆ ಮಾಗಿ ಚಳಿಗೆ ಮೈ ಒಡ್ಡದಿದ್ದರೆ ಏನೋ ಕಳದುಕೊಂಡಂತೆ ಎಂಬುದು ಮಲೆನಾಡಿನ ಚಳಿಗಾಲ ಕಂಡವರ ಅಂಬೋಣ!</span></div><div><span style="font-size:130%;color:#000099;"></span><br /></div><div><span style="font-size:130%;color:#009900;">ಈ ಬಾರಿಯ ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದೆ!</span></div><br /><div><span style="font-size:130%;"><span style="color:#009900;">[<span style="color:#ff6600;">ಟಿಪ್ಪಣಿ:</span></span><span style="color:#ff6600;">ಇದು ಪ್ರತಿ ವರ್ಷದ ಮಲೆನಾಡಿನ ಚಳಿಗಾಲದ ದಿನಚರಿ, ನನ್ನ ನಿಲುಕಿಗೆ ಸಿಕ್ಕಷ್ಟು ಚಳಿಯ ಛಳಕುಗಳನ್ನು ಇಲ್ಲಿ ಬರೆದಿದ್ದೇನೆ. ನಿಜಕ್ಕೂ ಮಲೆನಾಡಿನ ಚಳಿಗಾಲ ಅದ್ಭುತವಾಗಿರುತ್ತದೆ. </span><br /></span></div><div><span style="font-size:130%;color:#ff6600;">ಈ ಬಾರಿ ಜೋರು ಚಳಿಯಲ್ಲಿ ಊರಿನಲ್ಲೇ ಇದ್ದರೂ 'ಪೇಷೆಂಟ್' ಪಟ್ಟ ಹೊತ್ತುಕೊಂಡಿದ್ದ ಕಾರಣ ಅಮ್ಮನೆಂಬ ಸೆಕ್ಯುರಿಟಿ ಸೂಪರ್ವೈಸರ್ ಅಂಗಳಕ್ಕೇ ಕಾಲಿಡಲು ಬಿಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಹಾಗಾಯಿತು.]</span></div><br /><br /><div>ಚಿತ್ರ ಕೃಪೆ: ಇಂಟರ್ನೆಟ್</div><br /><br /><br /><div><span style="font-size:130%;color:#000099;"></span></div>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com7tag:blogger.com,1999:blog-217924085175002471.post-1536446144687094962009-01-03T01:38:00.005-08:002009-01-03T01:45:23.538-08:00"ದೊಡ್ಡ" ಬಜಾರಿನ ಟಿ (ಫ್ರೀ) ಶರಟು ಪ್ರಸಂಗವು<span style="font-size:130%;color:#6600cc;"><span style="font-size:180%;">ಅ</span>ದು "ಮಾಲ್"ಗಳ ರೇಸಿನಲ್ಲಿ ಮುಂಚೂಣಿಯಲ್ಲಿರುವ "ದೊಡ್ಡ"ಬಜಾರು. ದಸರಾ ಸಮಯದಲ್ಲಿ ಅರಮನೆ ನಗರಿಯಲ್ಲಿಯೂ ತನ್ನ ಖಾತೆ ತೆರೆದು ದೊಡ್ಡ ಮಟ್ಟದಲ್ಲೇ ಜನರನ್ನು ಸೆಳೆಯತೊಡಗಿತು. ಅದು ಆರಂಭವಾಗುವ ಮೊದಲೇ "ಹಾಗಂತೆ, ಹೀಗಂತೆ" ಎಂಬ ಅಂತೆ - ಕಂತೆಗಳ ಸಾಲು ಸಂತೆಯೇ ಹುಟ್ಟಿಕೊಂಡಿತ್ತು. </span><br /><br /><span style="font-size:130%;color:#6600cc;"><span style="font-size:180%;">ದೀ</span>ಪಾವಳಿ ಸಮಯದಲ್ಲಿ 2 ಶರಟು ಕೊಂಡರೆ 1 ಫ್ರೀ ಎಂಬ ಆಫರ್ ಘೋಷಣೆಯಾದಾಗ ನಾವೊಂದಿಷ್ಟು ಮಿತ್ರರು ಒಮ್ಮೆ ಆ 'ದೊಡ್ಡ' ಬಜಾರಿಗೆ ದಾಳಿಯಿಡುವ ಸ್ಕೆಚ್ ರೂಪಿಸಿದೆವು! ಆ ಪ್ರಕಾರ 3 ಜನರಂತೆ ಗುಂಪಿನಲ್ಲಿ ಶರಟು ಸೆಲೆಕ್ಟ್ ಮಾಡಿ ಖರೀದಿಸುವುದು. ನಂತರ ಒಟ್ಟು ಮೊತ್ತದಲ್ಲಿ ಷೇರ್ ಮಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಗ ಪ್ರತಿಯೊಬ್ಬರಿಗೂ 1 ಶರಟಿನ ಮೇಲೆ 50 - 60 ರೂ. ಉಳಿತಾಯವಾಗುತ್ತದೆಂಬ ಲೆಕ್ಕಾಚಾರ ನಮ್ಮದಾಗಿತ್ತು. </span><br /><br /><span style="font-size:130%;color:#6600cc;"><span style="font-size:180%;">ಅಂ</span>ತೆಯೇ ಒಂದು ದಿನ ಮುಹೂರ್ತ(!) ನಿಗದಿಪಡಿಸಿಕೊಂಡು ಬಜಾರ್ ಒಳಕ್ಕೆ ಪಾದಾರ್ಪಣೆ ಮಾಡಿದೆವು. ಅತ್ತಿತ್ತ ಕಣ್ಣು ಹಾಯಿಸದೆ ಸೀದಾ ಸಿದ್ಧ ಉಡುಪುಗಳ ವಿಭಾಗಕ್ಕೆ ಹೋದರೆ, ಅಲ್ಲಿನ ದೃಶ್ಯ ನಮ್ಮನ್ನು ದಂಗುಬಡಿಸಿತು. ಎಲ್ಲರೂ "ಆಯ್ಕಳಿ.. ತುಂಬ್ಕಳಿ" ಸಿದ್ದಾಂತವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು. ಒಬ್ಬೊಬ್ಬರ ಹೆಗಲಮೇಲೂ ನಾಲ್ಕಾರು ಶರಟು, ಕೈಯಲ್ಲಿ ನಾಲ್ಕಾರು ಪ್ಯಾಂಟು ರಾರಾಜಿಸುತ್ತಿದ್ದವು. ಅಷ್ಟಕ್ಕೇ ಮುಗಿಯಲಿಲ್ಲ,: ಎದುರಿಗಿದ್ದ ತಳ್ಳುಗಾಡಿಯೊಳಗೂ ಹತ್ತಾರು ಶರ್ಟು, ಪ್ಯಾಂಟುಗಳನ್ನು ತುಂಬಿಕೊಂಡಿದ್ದರು. ಇದನ್ನು ನೋಡಿದ ನಮಗೆ ಅವನೇನು ತನಗೆ ಬಟ್ಟೆ ಕೊಂಡಿದ್ದಾನೋ ಅಥವಾ ಮತ್ತೆಲ್ಲೋ ಹೋಗಿ ರಿಟೇಲ್ ಷಾಪ್ ತೆರೆಯುತ್ತಾನೋ ಎಂಬುದು ಅರ್ಥವಾಗಲಿಲ್ಲ! </span><br /><br /><span style="font-size:130%;color:#6600cc;"><span style="font-size:180%;">ಸ</span>ಮಯ ವ್ಯರ್ಥಮಾಡದೆ ನಾವೂ ಶರಟು ಆಯ್ಕೆ ಮಾಡುವತ್ತ ಗಮನಹರಿಸಿದೆವು. ಒಂದು ಗಂಟೆ ಹುಡುಕಿದರೂ ನಮಗೆ ಸರಿಹೊಂದುವ ಶರಟು ಸಿಗಲಿಲ್ಲ. ಸಿಕ್ಕ ಶರಟು ಗಳಲ್ಲವೂ ಮಿಂಚಿಂಗ್ ಪೌಡರ್, ಬಿಂಗು ಇತ್ಯಾದಿಗಳನ್ನು ಅಂಟಿಸಿ ಮಾಡಿದ ಡಿಸೈನ್ ನಿಂದ ಝಗಮಗಿಸುತ್ತಿದ್ದವು. ಅದನ್ನು </span><br /><span style="font-size:130%;color:#6600cc;"></span><br /><span style="font-size:130%;color:#6600cc;"><img id="BLOGGER_PHOTO_ID_5287000210719281682" style="DISPLAY: block; MARGIN: 0px auto 10px; WIDTH: 379px; CURSOR: hand; HEIGHT: 400px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEjbRCBEApCmnV4pjQGiLlV_V3rQ6ZhFtlgvth61KO7q0iq7FxH5l41R_5wj8-J0iarrsz52MOdo0pqbMUIkhJvMSUUuW_y4d1jH09XZQsNJ8-5mHjsbELnJR8bqJUqfNLEyaQ4NI7TRQEiW/s400/tshirts-02.JPG" border="0" />ಧರಿಸಿ ಕನ್ನಡಿ ನೋಡಿದರೆ ನಾವೇ ಒಂದು ನಡೆದಾಡುವ ಫ್ಯಾನ್ಸಿಸ್ಟೋರಿನಂತೆ ಕಾಣುತ್ತಿದ್ದೆವು! ಇನ್ನು ಕೆಲವು ಶರಟುಗಳ ಮೇಲೆ ಎ ಬಿ ಸಿ ಡಿ ಆದಿಯಾಗಿ ಎಲ್ಲ ಲಿಪಿಗಳೂ ಇದ್ದವು. </span><br /><br /><span style="font-size:130%;color:#6600cc;"><span style="font-size:180%;">ಹೀ</span>ಗೆ ನಮ್ಮ ಶರಟು ಟ್ರಯಲ್ ನೋಡುವ ಭರಾಟೆ ನೋಡಿದ ಸೆಕ್ಯುರಿಟಿಯವರಿಗೆ ಬಹುಶಃ ನಾವು ಅನುಮಾನಾಸ್ಪದ ವ್ಯಕ್ತಿಗಗಳಂತೆ ಕಾಣಿಸಿರಬೇಕು. ಒಂದೆರಡುಬಾರಿ ನಮ್ಮ ಸುತ್ತಮುತ್ತ ಸುಳಿದಾಡಿದರು! ಅಂತೂ ಎರಡು ಗಂಟೆ ಜಾಲಾಡಿ ಮೂವರೂ ಇದ್ದುದರಲ್ಲೇ ಸ್ವಲ್ಪ ಪರವಾಗಿಲ್ಲ ಎಂಬಂತಹ ಶರಟುಗಳನ್ನು ಆಯ್ಕೆ ಮಾಡಿಕೊಂಡು ಬಿಲ್ ಕೌಂಟರ್ ಬಳಿ ಹೋದೆವು. </span><br /><br /><span style="font-size:130%;color:#6600cc;"><span style="font-size:180%;">ಆ</span>ಗಲೇ ನಮಗೆ ಗೊತ್ತಾಗಿದ್ದು ನಮ್ಮ ಸ್ಕೆಚ್ ಫ್ಲಾಪ್ ಆಗಿದೆ ಎಂಬ ವಿಚಾರ. 250ರೂ.ಗಿಂತ ಹೆಚ್ಚಿನ ಬೆಲೆಯ 2 ಶರಟು ಕೊಂಡಾಗ ಮಾತ್ರ 1 ಶರಟು ಫ್ರೀ ಕೊಡುವುದು ಎಂದು ಕೌಂಟರಿನವ ಹೇಳಿದ. ಅರೆ ಕ್ಷಣ ನನ್ನ ಮಿತ್ರನತ್ತ ನೋಡಿದೆ. ನನಗೇನಾದರೂ ಶಾಪ ಕೊಡುವ ಶಕ್ತಿ ಇದ್ದಿದ್ದರೆ ಈ ಸ್ಕೆಚ್ ಹಾಕಿದ ಅವ ಕ್ಷಣದಲ್ಲೇ ಬೂದಿಯಾಗಿರುತ್ತಿದ್ದ.! ಆದರೂ ಕೌಂಟರಿನವನೊಡನೆ ಸ್ವಲ್ಪ "ಮಾತುಕತೆ" ನಡೆಯಿತು. 'ನೀವು ಸೇಲ್ಸ್ ಮ್ಯಾನ್ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು' ಎಂದಿದ್ದಕ್ಕೆ ಆತನಿಗೆ ಸಣ್ಣ ಮಟ್ಟದ 'ಮಂಗಳಾರತಿ'ಯೂ ಆಯಿತು. </span><br /><br /><span style="font-size:130%;color:#6600cc;"><span style="font-size:180%;">ನ</span>ಮ್ಮ ಸ್ಕೆಚ್ಚು ಫ್ಲಾಪ್ ಆಗಿದ್ದು ಸ್ವಲ್ಪ ಬೇಸರ ತಂದಿತಾದರೂ ಹೇಗೂ ಹಬ್ಬಕ್ಕೆ ಒಂದು ಶರಟು ಕೊಳ್ಳಬೇಕಾಗಿದ್ದರಿಂದ ಮೂವರೂ ಶರಟು ಕೊಂಡು ವಾಪಸಾದೆವು.</span><br /><br /><span style="font-size:130%;color:#6600cc;"></span><br /><br /><span style="font-size:130%;color:#6600cc;"><span style="font-size:85%;">ಚಿತ್ರ ಕೃಪೆ: ಇಂಟರ್ನೆಟ್</span> </span>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com7tag:blogger.com,1999:blog-217924085175002471.post-37675735026481980142008-12-15T02:07:00.039-08:002008-12-16T02:39:49.730-08:00ಹೀಗೊಂದು ಕಥಾ ಕಾಲಕ್ಷೇಪ<div align="center"><span style="font-size:180%;color:#6666cc;">ಜನ - ಜಾತ್ರೆ</span></div><div align="center"><span style="font-size:180%;"><br /></div><p></span><span style="font-size:130%;"><span style="color:#009900;"><span style="font-size:180%;">ಅ</span>ದೊಂದು ಪ್ರಸಿದ್ಧ ಯಾತ್ರಾ ಕ್ಷೇತ್ರ. ಅಲ್ಲಿನ ಹಳೇ ಕಾಲದ ದೇಗುಲಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ <a href="https://blogger.googleusercontent.com/img/b/R29vZ2xl/AVvXsEi8WEDNqAI-23VWNval8sdaawS3b9Lyw5DQdGLt6Xc9J95ubT-x3Bj2yOKUvWHmpZoI-b6-sfdD5cRu_HVNWw8RsVYeNeMs83azwpfGcyZmjs2mBfmiJUJO9Tl7wfyvmH3kbn1n8R83qXCO/s1600-h/chariot.jpg"><img id="BLOGGER_PHOTO_ID_5280328910505683506" style="FLOAT: left; MARGIN: 0px 10px 10px 0px; WIDTH: 400px; CURSOR: hand; HEIGHT: 300px" alt="" src="https://blogger.googleusercontent.com/img/b/R29vZ2xl/AVvXsEi8WEDNqAI-23VWNval8sdaawS3b9Lyw5DQdGLt6Xc9J95ubT-x3Bj2yOKUvWHmpZoI-b6-sfdD5cRu_HVNWw8RsVYeNeMs83azwpfGcyZmjs2mBfmiJUJO9Tl7wfyvmH3kbn1n8R83qXCO/s400/chariot.jpg" border="0" /></a>ನೀಡುತ್ತಿದ್ದರು. ಹಾಗಾಗಿಯೇ ದೇಗುಲದ ಸುತ್ತಮುತ್ತಲಿದ್ದ ಅಂಗಡಿಯವರು, ಬೀದಿ ವ್ಯಾಪಾರಿಗಳು ತುಸು ಕಾಸು ಕಾಣುವಂತಾಗಿದ್ದರು. ಜಾತ್ರೆ, ಉತ್ಸವಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚಿರುತ್ತಿದ್ದುದರಿಂದ ವ್ಯಾಪಾರಿಗಳಿಗೂ ಅದು ಸುಗ್ಗಿ ಕಾಲ.</span></span><br /><span style="font-size:130%;color:#009900;"></span><span style="font-size:130%;"><br /><span style="color:#009900;"><span style="font-size:180%;">ಆ</span> ಹುಡುಗ ನಿತ್ಯ ಅದೇ ಬೀದಿಯಲ್ಲಿ ನಿಂತು ಮಿರಮಿರನೆ ಹೊಳೆಯುವ ರೇಡಿಯಂ ಬಾಲುಗಳನ್ನು ಮಾರುತ್ತಿದ್ದ. 'ಅದೇನು ಈ ವಯಸ್ಸಿನಲ್ಲಿ ದುಡಿಮೆಯೇ!?' ಎಂದು ನೀವಂದುಕೊಳ್ಳಬಹುದು. ವಾಸ್ತವದ ನೆಲೆಯಲ್ಲಿ ನೋಡುವುದಾದರೆ; ಚಿಕ್ಕಾಸು ದುಡಿಯದೆ ಕುಡಿದು ಕುಡಿದೇ ಸತ್ತುಹೋದ ತಂದೆ, ವೃದ್ಧ ತಾಯಿ, ಸಣ್ಣ ತಂಗಿಯರು - ಇವೆಲ್ಲ ಅವನ ಬಾಲ್ಯವೆಂಬ ಬಣ್ಣದ ಪೆಟ್ಟಿಗೆಗೆ ಬೀಗ ಜಡಿದು ಬದುಕಿನ ಭಾರಕ್ಕೆ ಅವನನ್ನು ನೊಗವಾಗಿಸಿದ್ದವು. ಅತೀತಕ್ಕೆ ಆತು ಹೇಳುವುದಾದರೆ; ಅವನ ಪೂರ್ವಾರ್ಜಿತ ಕರ್ಮ ಅವನನ್ನು ಈ ಸ್ಥಿತಿಗೆ ತಂದಿತ್ತು.</span> </span><br /><span style="font-size:130%;"><br /><span style="color:#009900;"><span style="font-size:180%;">ಈ </span>ಸ್ಥಿತಿಯ ಬಗ್ಗೆ ಅವನಿಗೆ ಕೊರಗು, ಸ್ವಾನುಕಂಪಗಳಿರಲಿಲ್ಲ! ಸದಾ ನಗು ಸೂಸುವ ಮುದ್ದು ಮುಖ, ಗುಳಿ ಬೀಳುವ ಕೆನ್ನೆಗಳು, ಗಿರಾಕಿಗಳೊಂದಿಗೂ ಹಸನ್ಮುಖಿಯಾಗಿಯೇ ವ್ಯವಹರಿಸುತ್ತಿದ್ದ. ಬಂದ ಹಣವನ್ನು ಮಾಲೀಕನಿಗೆ ನೀಡಿ, ತನ್ನ ಕಮೀಷನ್ ಪಡೆದು ತೃಪ್ತಿಯಿಂದ ಮನೆಗೆ ತೆರಳುತ್ತಿದ್ದ. </span></span><br /><br /></p><p><img id="BLOGGER_PHOTO_ID_5280332390469402226" style="DISPLAY: block; MARGIN: 0px auto 10px; WIDTH: 266px; CURSOR: hand; HEIGHT: 400px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEgDipBmW2taaVf3HEOKcgCesYKPB4CDnleOOQtJj3HZrk52WQ5bbQ3IwA2PC16cN5VPv2xZOJrCkfgGxaK9FS3tBfpOxzaWvVnO4sKrXm8OjgL1aYlQ-LZzzDdAIXTIERm6ljWnd6xI24LV/s400/Boy.jpg" border="0" /><span style="font-size:130%;"> <span style="color:#009900;"><span style="font-size:180%;">ಅಂ</span>ದು ದೇಗುಲದಲ್ಲಿ ಜಾತ್ರೆ. ಹುಡುಗನಿಗೂ ವ್ಯಾಪಾರ ಜೋರಾಗಿಯೇ ಇತ್ತು. ಸಂಜೆಯಾಗುತ್ತಿದ್ದಂತೆ ಉಕ್ಕಿ ಬರತೊಡಗಿದ ಜನಪ್ರವಾಹದಿಂದ ಜಾತ್ರೆ ರಂಗೇರತೊಡಗಿತು. ಹುಡುಗನೂ ತನ್ನಲ್ಲುಳಿದಿದ್ದ ಕೆಲವೇ ಬಾಲುಗಳನ್ನು ಮಾರಿ ಮನೆಗೆ ತೆರಳಲು ಉತ್ಸುಕನಾಗಿದ್ದ. ಆಗಲೇ ಜಾತ್ರೆಯುದ್ದಕ್ಕೂ ಹಾವಳಿಯಿಡುತ್ತಿದ್ದ ಐದಾರು ಯುವಕರ ಗುಂಪೊಂದು ಹುಡುಗನ ಸುತ್ತ ಜಮಾಯಿಸಿತು. ಅವರಲ್ಲೊಬ್ಬ ಬಾಲ್ ತೆಗೆದುಕೊಂಡು ಖರೀದಿಸುವವನಂತೆ ಪರೀಕ್ಷಿಸುತ್ತ ಬೆಲೆ ವಿಚಾರಿಸತೊಡಗಿದ. ಮುಂದಿನ ಕೆಲ ಕ್ಷಣಗಳಲ್ಲೇ ಬಾಲ್ ತೆಗೆದುಕೊಳ್ಳುವ ಕೈಗಳು ಎರಡರಿಂದ ನಾಲ್ಕಾದವು. ನಾಲ್ಕರಿಂದ ಎಂಟಾದವು. ನೋಡ ನೋಡುವಷ್ಟರಲ್ಲಿ ಹುಡುಗನ ಬಳಿ ಬೆರಳೆಣಿಕೆಯಷ್ಟು ಬಾಲ್ ಮಾತ್ರ ಉಳಿದವು. ಎರಡು ಬಾಲುಗಳನ್ನು ಮಾತ್ರ ಹಿಂದಿರುಗಿಸಿದ ಆ ಗುಂಪು ಜನಸಾಗರದ ನಡುವೆ ಕರಗಿಹೋಯಿತು. ಆ ಪುಂಡರ ಕೈ ಚಳಕ(?)ದ ಮುಂದೆ ಹುಡುಗನ ಹದ್ದಿನಕಣ್ಣುಗಳು ಸೋತವು. ' ಏ ಬಾಲ್ ದೇ ಭಾಯ್' ಎಂಬ ಹುಡುಗನ ಧ್ವನಿ ಜಾತ್ರೆಯ ಗೌಜಿನಲ್ಲಿ ಲೀನವಾಯಿತು.</span><br /><br /><span style="color:#009900;"><span style="font-size:180%;">ಅ</span>ಷ್ಟು ದೊಡ್ಡ ಜನ ಜಾತ್ರೆಯಲ್ಲಿಯೂ ತನಗೆ ನೆರವಾಗಬಲ್ಲ ಜೀವವೊಂದು ಇರದಿದ್ದಕ್ಕೆ ಹುಡುಗನ ಹೃದಯ ಪ್ರವಾಹಕ್ಕೆ ಸಿಕ್ಕ ನಾವೆಯಂತೆ ತತ್ತರಿಸಿತು. ಸೋತ ಕಣ್ಣುಗಳಿಂದ ಹೊರಟ ಅಶ್ರುಧಾರೆಗಳು ಕೆನ್ನೆಯ ಗುಳಿಯಲ್ಲಿ ಇಂಗಿ ಇಲ್ಲವಾದವು.</span><br /><br /><span style="color:#009900;"><span style="font-size:180%;">ಮ</span>ರುದಿನ: ಜಾತ್ರೆಯ ತೇರು, ಜೋರುಗಳೆಲ್ಲ ಮುಗಿದು ನೆರೆ ಇಳಿದ ನದಿಯಂತೆ ಸ್ತಬ್ಧವಾಗಿತ್ತು ಆ ಪ್ರದೇಶ. ಮುನ್ನಾದಿನ ಜನ ಪ್ರವಾಹವೆಸಗಿದ ಹಾನಿಯನ್ನೆಲ್ಲ ಬಳಿದು, ಆವರಣವನ್ನು 'ಸ್ವಚ್ಛ'ವಾಗಿಡುವ ಯತ್ನದಲ್ಲಿದ್ದರು ಪುರಸಭೆಯವರು. ಆ ಹುಡುಗನ ಜಾಗದಲ್ಲಿ ತರುಣನೊಬ್ಬ ನಿಂತು ಹೂವು ಮಾರುತ್ತಿದ್ದ.</span></span></p><p> </p><p>ಫೋಟೊ ಕೃಪೆ: ಇಂಟರ್ನೆಟ್<br /></span><br /><br /><br /><br /></span></span></p>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com6tag:blogger.com,1999:blog-217924085175002471.post-75905583591632525862008-12-09T20:44:00.001-08:002008-12-15T22:32:04.731-08:00ಕ್ವಾಟ್ಲೆ ಕೊತ್ವಾಲ್ ಎಂಬ ಹೊಸ ರಾಗ<span style="font-family:courier new;"><span style="font-size:130%;color:#ff6600;">ಸುಮ್ಮನೆ ಹರಟೆ ಕೊಚ್ಚುತ್ತ ಕುಳಿತಾಗ ಹೊಕ್ಕ ಹುಳ ಈ <strong><em>ಕ್ವಾಟ್ಲೆ ಕೊತ್ವಾಲ್'. </em></strong>ಇದು ಕೇವಲ ಕ್ವಾಟ್ಲೆ(ತಮಾಷೆ)ಗಾಗಿ. ಇದರ ಹಿಂದೆ ಯಾರನ್ನೂ ಚುಚ್ಚುವ, ಅಪಹಾಸ್ಯ ಮಾಡುವ ಉದ್ದೇಶವಿಲ್ಲ.</span><br /><span style="font-size:130%;color:#ff6600;">ನಿಮಗೆ ಇಷ್ಟವಾಯಿತಾದರೆ ಕೊತ್ವಾಲ್ ಆಗಾಗ ಕಾಣಿಸಿಕೊಳ್ಳಲಿದ್ದಾನೆ.</span> </span><br /><span style="font-family:courier new;"><br /><span style="font-size:130%;color:#ff6600;">ಪಾತ್ರ ಪರಿಚಯ: ಕೊತ್ವಾಲ್- ಒಬ್ಬ ಸುದ್ದಿ ಪ್ರಿಯ. ತನ್ನ ಶಿಷ್ಯನ ಮೂಲಕ ಊರ, ಪರಊರ ಸುದ್ದಿ ತಿಳಿಯುವುದು ಇವನ ಪ್ರಿಯವಾದ ಹವ್ಯಾಸ. </span><br /><span style="font-size:130%;color:#ff6600;">ಕಿಳ್ಳೇಕ್ಯಾತ:- ಕೊತ್ವಾಲನ ಶಿಷ್ಯ. ವಿಷಯ ಸಂಗ್ರಹಣೆಯಲ್ಲಿ ನಿಪುಣ.</span><br /><br /><span style="color:#000099;"><span style="font-size:130%;">ಯಾವತ್ತಿನಂತೆ ತನ್ನ ಆಸನದಲ್ಲಿ ವಿರಾಜಮಾನನಾದ ಕ್ವಾಟ್ಲೆ ಕ್ವತ್ವಾಲ್ ತನ್ನ ಶಿಷ್ಯ ಕಿಳ್ಳೇಕ್ಯಾತನ ಪ್ರತೀಕ್ಷೆಯಲ್ಲಿ ತೊಡಗಿದ. ಯಾವತ್ತೂ ತಾನು ಆಸೀನನಾಗುತ್ತಿದ್ದಂತೆ ಎದುರಿಗೆ ವಕ್ಕರಿಸುತ್ತಿದ್ದ ಶಿಷ್ಯೋತ್ತಮ ಇಂದು ಕಾಣದಿದ್ದಾಗ 'ಬಡ್ಡೇತದು ಊರ ಸುದ್ದಿ ತಿಳ್ಕಂಡು ಬಾರ್ಲಾ ಅಂತ ಕಳಿಸಿದ್ದರೆ ಎಲ್ಲಿ ಹಕ್ಕಲು ಪಟ್ಟಾಂಗ ಮಾಡುತ್ತ ಕುಳೀತಿದೆಯೋ' ಎಂದು ಗೊಣಗಿಕೊಂಡ.!</span><br /><span style="font-size:130%;">ಅಷ್ಟರಲ್ಲೇ "ಬಂದು ಬಾಳಾ ಹೊತ್ತಾತಾ ಗುರುಗ್ಳೇ...?" ಎನ್ನುತ್ತ ಕಿಳ್ಳೆಕ್ಯಾತ ಕೊತ್ವಾಲನ ಮುಂದೆ ಪ್ರತ್ಯಕ್ಷನಾದ.</span><br /><br /><span style="font-size:130%;">ಎಲ್ಲಾ ಫಾರ್ಮಾಲಿಟೀಸ್ ಬದಿಗಿಟ್ಟು ಕೊತ್ವಾಲ ಕಿಳ್ಳೇಕ್ಯಾತನ ಬೀಟ್ ಡೈರಿಯ ಪರಿಶೀಲನೆಗೆ ಮುಂದಾದ.</span><br /><span style="font-size:130%;">"ಏನ್ಲಾ, ಪದ್ಮನಾಭ ಪುರದ ಪವರ್ ಹೌಸ್ ಕಡಿಗೆ ಹೋಗಿ "ದೊಡ್ಡವ್ರು" ಸೆಂದಾಕ್ಕವ್ರಾ ವಿಚಾರಿಸ್ಕಂಡ್ ಬಾ ಅಂದಿದ್ದೆ. ಹೋಗಿದ್ದೇನ್ಲಾ?"</span><br /><br /><span style="font-size:130%;">ಕಿ.ಕ್ಯಾ. ತಕ್ಷಣವೇ ತನ್ನ ಬೀಟ್ ಪ್ರವರ ಒಪ್ಪಿಸತೊಡಗಿದ: "ಹೂಂ ಗುರುಗ್ಳೇ ಹೋಗಿದ್ದೆ. ಆದ್ರೆ ದೊಡ್ಡವ್ರು ಮನ್ಯಾಗೆ ಇರ್ನಿಲ್ಲ. ಅದೆ ಮೊನ್ನೆ ನಡೆದ ರಾಲಿನಾಗೆ ತುತ್ತೂರಿ ಊದಾವ ಅಂತ ಇದ್ದಬದ್ದ ಉಸರೆಲ್ಲಾ ಹಾಕಿ ಪುಸುಗುಟ್ಟಿದ್ರೂ ತುತ್ತೂರಿ ಸ್ವರ ಹೊರ್ಟಿರ್ಲಿಲ್ವಲ್ಲ , ಅದ್ಕೆ ಶಾನೆ ಬೇಜಾರ್ ಮಾಡ್ಕಂಡು ಯಾವ್ದಾರೂ ರಾಹು ಕೇತು ವಕ್ಕರಿಸಿಕೊಂಡವ್ರಾ? ಉಪ ಚುನಾವಣೇ ಬೇರೆ ಬಂತು. ಕೇಳ್ಕಂಬತ್ತೀನಿ ಅಂತ ದೇವರ ನಾಡು(God's Own country) ಕಡೆ ಹೋಗವ್ರಂತೆ. ವಾಪಸ್ ಬರಾದು ಮುಂದಿನ್ ಅಮಾಸೆ ಕಳೆದ ಮ್ಯಾಕಂತೆ.!"</span><br /><br /><span style="font-size:130%;">"ಹೌದಾ? ನಮ್ ಸುಬ್ರಹ್ಮಣ್ಯಸ್ವಾಮಿಗಳಾದ್ರೂ ಸಿಕ್ಕಿದ್ರಾ?"</span><br /><span style="font-size:130%;">ಕಿ.ಕ್ಯಾ.:"ಸಿಕ್ಕಿದ್ರು. ಆದ್ರೆ ಅವರೂ ಡಲ್ಲಾಗಿದ್ರು. ಮಾತಾಡ ಮೂಡ್ನಾಗೆ ಇರ್ನಿಲ್ಲ.!"</span><br /><span style="font-size:130%;">"ಅದ್ಯಾಕ್ಲಾ? ಮೊನ್ನೆ ಗಂಟ ಗುಂಡ್ಕಲ್ ಇದ್ದಂಗೆ ಇದ್ರಲ್ಲ! ಈಗೇನಾತ್ಲಾ?"</span><br /><span style="font-size:130%;">" ಯಾವ್ದೊ ಭಾಸಣದಾಗೆ 'ನಾನು ಇನ್ಮುಂದೆ ಪಂಚೆ ಉಟ್ಕಂಡೇ ಓಡಾಡ್ತೀನಿ' ಅಂತ ಹೇಳಿದ್ದಕ್ಕೆ ಯಾರೋ ಕರೆಂಟ್ ಕೊಟ್ಟಂಗೆ ಕಮೆಂಟ್ ಮಾಡವ್ರಂತಲ್ಲಾ!?"</span><br /><span style="font-size:130%;">"ಯಾರ್ಲಾ ಅದು ಅಂಥಾ ಗಂಡು!?"</span><br /><span style="font-size:130%;">"ಅವರಾ ಹೆಸ್ರು "ಪುಟ್ಟ"ದಾಗಿದ್ರೂ ಕ್ಯಾರೆಕ್ಟರು ಫವರ್ಫುಲ್ ಆಗಿರೋ "ಅಣ್ಣಯ್ಯ" ಒಬ್ರು ಅವ್ರಂತಲ್ಲ! ಅವರೇ ಈ ಕ(ರೆ)ಮೆಂಟ್ ಕೊಟ್ಟೋರು. ಅವರು 'ಸ್ವಾಮಿಯವರು ನಿಜವಾದ ಮಣ್ಣಿನ ಮೊಮ್ಮಗನೇ ಆಗಿದ್ರೆ ಚಡ್ಡಿ ಹಾಕ್ಕಂಡು ತಿರುಗಾಡ್ಲಿ. ನಾನು ಒಪ್ಕತೀನಿ......' ಅಂತೆಲ್ಲಾ ಹೇಳಿದ್ರಂತೆ. ಅದ್ಕೆ ಇವ್ರು ವರ್ಸಾನುದಿನ ತೊಳೆಯದ ಪಂಚೆ ಥರ ಮುಖ ಮಾಡ್ಕಂಡು ಕುಂತ್ಕಂಡಿದ್ರು!"</span><br /><br /><span style="font-size:130%;">"ಹೋಗ್ಲಿ. ನಮ್ಮ ಚಿಕ್ಕತಮ್ಮಯ್ಯ ಆದ್ರೂ ಸಿಕ್ಕುದ್ರಾ?"</span><br /><span style="font-size:130%;">"ಇಲ್ಲ.! ಅಣ್ಣ ಸ್ವಾಮಿ ಆ ಪರಿ ಬೇಜಾರು ಮಾಡ್ಕಂಡಿರಾದು ನೋಡಿ 'ಹೋಗ್ಲಿ ಅತ್ಲಾಗೆ ಒಂದು ಪಟ್ಟಾಪಟ್ಟಿ ಚಡ್ಡೀನಾರ ತಂದುಕೊಡಾವ ಅಂತ ಜವಳಿ ಸಾಪ್ ಕಡೆ ಹೋಗಿದ್ರಂತೆ.! ಅಣ್ಣದೇವರ ಸೈಜಿನ್ ಚಡ್ಡಿ ಎಲ್ಲೂ ಸಿಗಾಕಿಲ್ಲ ಅಂತಂದಾಗ ಯಾವದಾರ ಸಾಮಿಯಾನ ಕಂಪ್ನಿಗೆ ಹೋಗಿ ಒಂದಷ್ಟು ಬಟ್ಟೆ ತತ್ತೀನಿ. ಫ್ರೀ ಸೈಜಿಂದು ಹೊಲಿಸಿದ್ರಾತು ಅಂತ ಸಾಮಿಯಾನ ಫ್ಯಾಕ್ಟರಿ ಹುಡಿಕ್ಕಂಡು ಹೋಗವ್ರಂತೆ!"</span><br /><span style="font-size:130%;">"ಅಯ್ಯೋ ಪಾಪ..! ಇತ್ತಾಗೆ ನಮ್ಮ ಹೈಕೋರ್ಟ್ ಎದುರಿಂದ ಏನಾರ ಸುದ್ದಿ ಐತಾ?"</span><br /><span style="font-size:130%;">"ಇಸೇಸ ಸುದ್ದಿ ಏನಿಲ್ಲ. ಈ ತಿಂಗ್ಳ 13ಕ್ಕೆ ನಮ್ ಕಲಾಂ ಸಾರು ಏನೋ 'ಕ್ಲಾಸ್ ತಗತ್ತೀನಿ ರೆಡಿಯಾಗಿರಿ" ಅಂದವ್ರಂತಲ್ಲ. ಅದ್ಕೆ ತಯಾರಾಗೋದ್ರಾಗೆ ಬಿಜಿಯಾಗವ್ರೆ ಎಲ್ಲ.!"</span><br /><br /><span style="font-size:130%;">"ಬೆಂದಕಾಳೂರಿಂದು ಈ ಕಥೆನಾ?" ಇನ್ನು ನಮ್ ಮಹಿಷಪುರ ಕತೆ ಏನಪ?"</span><br /><span style="font-size:130%;">"ಅಯ್ಯೋ ಇಲ್ಲಿದೇನು ಬುಡಿ ಸಿವಾ! ಉಸ್ತುವಾರಿ ನೋಡೋ 'ಅಕ್ಕೋರು' ದಸರಾನ 'ಶೋಭಾ'ಯಮಾನವಾಗಿ ಮಾಡಿ ಮುಗ್ಸುದ್ದು ನೋಡಿ 'ಅಪ್ಪೋರು' ದಿಲ್ ಕುಸ್ ಆಗವ್ರಂತೆ. ಅದ್ನ ಕಂಡು ಖುಸಿಯಾದ ಅಕ್ಕೋರು 'ಮುಂದಿನ ದಸರಾಗೆ ಈಗ್ಲಿಂದೆ ತಯಾರಿ ಸುರುಹಚ್ಕಳಿ' ಅಂತ ಅಧಿಕಾರಿಗುಳೀಗೆ ಏಳಿ ತಮ್ಮ ಗೂಟದ ಕಾರು ಹತ್ತಿ ಹೋದವ್ರು ಇನ್ನೂ ಇತ್ತಾ ಕಡೆ ಮುಖ ಮಾಡಿಲ್ವಂತೆ. ಇತ್ತಾಗೆ ರಂಗಾಯಣದಾಗೆ ಬಹುರೂಪಿ ನಾಟಕೋತ್ಸವ ಬಂತಲ್ಲ, ಅದ್ಕೆ ನಮ್ಮ ಖ್ಯಾ(ತೆ)ತ ಇಮರ್ಸಕರೆಲ್ಲ ಹೊಸ ಪೆನ್ನು ತಗಂಡು, ಜುಬ್ಬ ಪೈಜಾಮ ತೊಳ್ಕೊಂಡು, ಫ್ರೆಂಚ್ ಗಡ್ಡ ಟ್ರಿಮ್ ಮಾಡ್ಕಂಡು ತಯಾರಾಗ್ತವ್ರೆ! ಈ ಸರ್ತಿ 'ಬಹುರೂಪಿ'ಲಿ ಏನ್ ಕುರೂಪ ಹುಡುಕ್ಲಿ ಅಂತ ಕನ್ನಡ್ಕ ಒರೆಸ್ಕೊಂಡು ಕುಂತವ್ರೆ!"</span><br /><br /><span style="font-size:130%;">"ಹೌದಾ. ಸರಿಕಣ್ ಬುಡು. ಬಹುರೂಪಿ ಟೇಮಿನಾಗೆ ಇತ್ಲಾಗೆ ಚೂರು ಗ್ಯಾನ ಮಡುಗು. ಬರೀ ಬೆಂದಕಾಳೂರ್ನಾಗೇ ಕಾಲ ಕಳಿತ ಕೂರ್ಬೇಡ" ಎಂದ ಕೊತ್ವಾಲ ಹೊರಡಲನುವಾದ.</span><br /></span><span style="font-size:130%;color:#3333ff;"><span style="color:#000099;">ಅದನ್ನು ಕಂಡ ಕಿ.ಕ್ಯಾ. ಮಾಮೂಲಿಗಾಗಿ ಕೈಯೊಡ್ಡಿ ಹಲ್ಲುಗಿಂಜಿದ. "ಥೂ ಬಡ್ಡೇತದೆ. ಈ ಚಿಲ್ರೆ ಬುದ್ಧಿ ಬುಡಾಕಿಲ್ವಲ ನೀನು" ಎಂದು ಹತ್ತು ರೂನ ನೋಟನ್ನು ನೀಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾದ</span>.</span></span>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com5tag:blogger.com,1999:blog-217924085175002471.post-66714432726996665902008-12-03T21:19:00.000-08:002008-12-03T21:49:50.136-08:00ಬ್ಲಾಗಿಗ 'ಹಳಿ' ತಪ್ಪಿದ ಕಥೆ<div align="left"><span style="color:#330099;"><span style="font-size:130%;"><span style="font-size:180%;">ಆ</span>ತ ನನ್ನ ಮಿತ್ರರಲ್ಲೊಬ್ಬ. ಆಗಾಗ ಅಂತಜಾಲದಲ್ಲಿ ಬ್ಲಾಗ್ ಬರೆಯುವ ಕಾರಣ ಮಿತ್ರ ವಲಯದಲ್ಲಿ ಆತ 'ಬ್ಲಾಗಿಗ' ಎಂದೇ ಬಿರುದಾಂಕಿತ. ಆತನಿಗೊಮ್ಮೆ ಮೈಸೂರಿಗೆ ಬರುವ ಕೆಲಸವಿತ್ತು. ಅವನು ಆಗಷ್ಟೇ ಕೆಲಸಕ್ಕೆ ಸೇರಿದ್ದನಾದ್ದರಿಂದ ಜೇಬಿಗೂ ಸ್ವಲ್ಪ ಭಾರವಾಗದಿರಲೆಂದು ರೈಲಿಗೇ ಬರುವಂತೆ ಹೇಳಿ, ರೈಲುಗಳ ವೇಳಾಪಟ್ಟಿಯನ್ನೆಲ್ಲ ಎಸ್ಸೆಮ್ಮೆಸ್ ಕಳಿಸಿದ್ದೆ. </span><br /><span style="font-size:130%;"></span><br /><span style="font-size:130%;"><span style="font-size:180%;">ಮ</span>ರುದಿನ ಬೆಳಿಗ್ಗೆ 7.30ರ ರೈಲಿಗೆ ಹೊರಟಿದ್ದೇನೆಂದು ಆತ ಮೆಸೇಜ್ ಕಳುಹಿಸಿದ. ಹನ್ನೊಂದು ಗಂಟೆ ಸುಮಾರಿಗೆ ಬರಬಹುದೆಂದು ಆತನಿಗಾಗಿ ಕಾಯುತ್ತಿದ್ದೆ. ಅಷ್ಟರಲ್ಲೇ 'ಮೈಸೂರಿಗೆ ಬರುವಾಗ 'ಬಂಗಾರಪೇಟೆ' ಅಂತ ಊರು ಸಿಗುತ್ತಾ?' ಎಂಬ ಪ್ರಶ್ನೆ ಹೊತ್ತ ಆತನ ಎಸ್ಸೆಮ್ಮೆಸ್ ಬಂತು. ಮಹಾಶಯ ಹಳಿತಪ್ಪಿದ್ದಾನೆಂದು ತಕ್ಷಣ ಅರಿವಾಯಿತು. ರೈಲುಗಳ ಸಮಯವನ್ನು ಸರಿಯಾಗಿ ಕಳಿಸಿದ್ದರೂ ಟಿಕೆಟ್ ನೀಡುವಾತ ಹೇಳಿದ ಪ್ಲಾಟ್ ಫಾಮ್ ಸಂಖ್ಯೆಯನ್ನೇ ನೆಚ್ಚಿಕೊಂಡು ರೈಲಿನ ಬೋಡ್ ಕೂಡ ನೋಡದೆ ಹತ್ತಿ ಕುಳಿತಿದ್ದ ಪುಣ್ಯಾತ್ಮ!</span><br /><span style="font-size:130%;"></span><br /><span style="font-size:130%;"><span style="font-size:180%;">ಒಂ</span>ದೆಡೆ ಸೀಟು ಸಿಗುತ್ತಿದ್ದಂತೆ ಭೈರಪ್ಪನವರ 'ಅನ್ವೇಷಣ'ದಲ್ಲಿ ಮುಳುಗಿದ್ದವನಿಗೆ ಗಂಟೆ ಹನ್ನೊಂದಾದರೂ ರೈಲು ಮೈಸೂರು ತಲುಪದಿದ್ದಾಗ ತಟ್ಟನೆ ಜ್ಞಾನೋದಯ(!) ವಾಗಿ 'ರೈಲು ಎಲ್ಲೆಲ್ಲೋ ಹೋಗ್ತಿದೆ ಮಾರಾಯ!' ಎಂದು ಗೊಣಗಿಕೊಂಡು ಮತ್ತೊಂದು ಮೆಸೇಜ್ ಬಿಟ್ಟ. ಎಲ್ಲೋ ಎಸೆದಿದ್ದ ರೈಲು ವೇಳಾಪಟ್ಟಿಯನ್ನು ಪುನಃ ಹುಡುಕಿ ಮೆಸೇಜ್ ಕಳೀಸಬೇಕಾದ ಕಮ ನನ್ನದಾಯಿತು. ಅದೇ ಸಮಯಕ್ಕೆ ಅವನ ಮೊಬೈಲ್ ಕರೆನ್ಸಿಯೂ ಖಾಲಿಯಾಗಿದ್ದರಿಂದ ಅದರ ರಿಚಾಜ್ ಹೊಣೆಯೂ ನನ್ನ ಹೆಗಲಿಗೇ ಬಿತ್ತು!</span><br /><span style="font-size:130%;"></span><br /><span style="font-size:130%;"><span style="font-size:180%;">ಆ</span>ತ ಬಂಗಾರಪೇಟೆಯಿಂದ ಬೆಂಗಳೂರಿಗೆ ಮರಳಿ ಬಂದು ಮೈಸೂರಿನ ರೈಲು ಹತ್ತುವವರೆಗೂ ಜೀವ ಎಡಗೈಲಿ ಹಿಡಿದುಕೊಂಡಂತಾಗಿತ್ತು ನನ್ನ ಸ್ಥಿತಿ. ಪ್ರಯಾಣದುದ್ದಕ್ಕೂ ಭೂಪ ಗಡದ್ದಾಗಿ ನಿದ್ದೆ ತೆಗೆಯುತ್ತಿದ್ದರೆ, ಪುಕ್ಕಟೆ ಪರೋಪಕಾರಿಯಾಗಲು ಹೊರಟ ನಾನು ಆತ ಮತ್ತೆಲ್ಲೋ ಕಾಣೆಯಾದರೆ ಗತಿಯೇನೆಂಬ ಆತಂಕದಲ್ಲಿದ್ದೆ. (ಅವ ಅಪ್ಪ-ಅಮ್ಮರಿಗೆ ಒಬ್ಬನೇ ಮಗ ಬೇರೆ!)</span><br /><span style="font-size:130%;"></span><br /><span style="font-size:130%;"><span style="font-size:180%;">ಇ</span>ಷ್ಟೆಲ್ಲ ಆಗುವಷ್ಟರಲ್ಲಿ ಈತ ಹಳಿ ತಪ್ಪಿದ ಸುದ್ದಿ ಅವನ ಸಹೋದ್ಯೋಗಿಯೊಬ್ಬರಿಗೆ ಗೊತ್ತಾಗಿ ವೃತ್ತಿಬಾಂಧವರ ನಡುವೆಯೆಲ್ಲಾ ಅದು ಪ್ರಚಾರವಾಗಿಬಿಟ್ಟಿತ್ತು. ಅವರೆಲ್ಲ ಫೋನಿನಲ್ಲೇ ಇವನನ್ನು ಒಂದು ಸುತ್ತು ಕಿಚಾಯಿಸಿ ಮಜ ತೆಗೆದುಕೊಂಡಿದ್ದರು. ರೈಲನ್ನೂ , ವೃತ್ತಿಬಾಂಧವರನ್ನೂ ದೂವಾಸ ಮುನಿಯಂತೆ ಶಪಿಸುತ್ತ ಸಂಜೆ ವೇಳೆಗೆ ಮಿತ್ರ ಮೈಸೂರು ತಲುಪಿದ. ಈ ನಡುವೆ ಆ ಮಹಾಶಯನನ್ನು ಹಳಿ ಹತ್ತಿಸುವಷ್ಟರಲ್ಲಿ ನಾನು ಹೈರಾಣಾದದ್ದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ!</span></span></div>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com8tag:blogger.com,1999:blog-217924085175002471.post-8412867433468395202008-10-31T23:12:00.000-07:002008-11-01T21:16:56.676-07:00ಹೀಗೊಂದು ಪಾರ್ಕು ಪುರಾಣವು<span style="font-size:130%;color:#000066;"><span style="font-size:180%;">ಅ</span>ದು ಕಾಂಕ್ರೀಟ್ ಕಾಡಿನ ಮಧ್ಯದಲ್ಲಿರುವ ಕೃತಕ ಕಾಡು. ಅರ್ಥಾತ್ ಅದೊಂದು ಪಾರ್ಕು. ಹೆಸರಿಗೆ ಪ್ರಕೃತಿಯ ಪ್ರತಿರೂಪವೆಂಬ ಹೆಗ್ಗಳಿಕೆ; ಒಳಗೆಲ್ಲಾ ಕೃತಕತೆಯ ಹೊದಿಕೆ! ಅಲ್ಲಿನ ಯಾವ ಮರ ಗಿಡಗಳಿಗೂ ತಮ್ಮಿಚ್ಚೆಯಂತೆ ಕುಡಿಯೊಡೆದು ಹಬ್ಬುವ ಭಾಗ್ಯವಿಲ್ಲ. ಮಾಲಿಯ ಮನದಿಚ್ಚೆಯಂತೆ ಅವುಗಳ ಕೊನರು.</span><br /><br /><span style="font-size:130%;color:#000066;"><span style="font-size:180%;">ಚು</span>ಮುಚುಮು ಇಬ್ಬನಿಯಲ್ಲಿ ತೋಯ್ದ ಪಾರ್ಕಿನ ಹುಲ್ಲುಹಾಸು ರವಿರಶ್ಮಿಗೆ ಮೈಯೊಡ್ಡಿ ಪುಳಕಗೊಳ್ಳಬೇಕೆನ್ನುವಷ್ಟರಲ್ಲೇ ಉಂಡು ಉಂಡೂ ಗುಂಡಗಾದ ಗುಂಡೋದರ ಲೆಫ್ಟ್ ರೈಟ್ ಮಾಡುವ ಕಾಲುಗಳಡಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುತ್ತದೆ. ಗಂಟೆ ಹತ್ತಾಗುತ್ತಿದ್ದಂತೆ ಪಾರ್ಕಿಗೆ ಪ್ರೇಮಿಗಳ ಆಗಮನವಾಗುತ್ತದೆ. ಪಾರ್ಕಿನ ತರುಲತೆಗಳೆಲ್ಲ ಜೋಡಿಹಕ್ಕಿಗಳ ಪಿಸುಮಾತಿಗೆ ಸಾಕ್ಷಿಯಾಗುತ್ತವೆ. ಪ್ರೇಮ ಸಾಮ್ರಾಜ್ಯ ಕಟ್ಟುವ ಕಾತುರದಲ್ಲಿರುವ ಅವರಿಗೆ ಅಲ್ಲಿ ಹೂ ಬಿಟ್ಟು ನಳನಳಿಸುವ ಗಿಡಗಳ ಮೈದಡವಲೂ ಸಮಯವಿರುವುದಿಲ್ಲ!ನಾಲ್ಕು ಗಂಟೆ ಸಮೀಪಿಸುತ್ತಿದ್ದಂತೆ ವೃದ್ಧರು, ಗೃಹಿಣಿಯರು ತಮ್ಮ ದಿನದ 'ಧುಮುಧುಮು' ಪರಿಹರಿಸಿಕೊಳ್ಳುವ ದೃಷ್ಯ ಸರ್ವೆ ಸಾಮಾನ್ಯ. ಅವರುಗಳ ದುಃಖ ದುಮ್ಮಾನಗಳಿಗೆ ಅಲ್ಲಿರುವ ಮರಗಿಡಗಳು ಕಿವಿಯಾಗುತ್ತವೆ.</span> <img id="BLOGGER_PHOTO_ID_5263749396793842674" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 299px; TEXT-ALIGN: center" alt="" src="https://blogger.googleusercontent.com/img/b/R29vZ2xl/AVvXsEiRVNBd4N61Gc_rMjexB8HpZoyjHgqgBF3Ky8OHIQWTN_ZnDpNGXSfUM4D4MgSEad_nj2hLdVUAHvA2oYPuQ-FTK4XYvOXjB0zI7UBXioRPJ-RXj4qWPwD-eqMP8Wmz7k6gAzTVHka1Y9NQ/s400/Copy+of+liz-strahan_jpg.jpg" border="0" /> <span style="font-size:130%;color:#000066;"><span style="font-size:180%;">ಸಂ</span>ಜೆ ಏಳಾಗುತ್ತಿದ್ದಂತೆ ಜನ ಸಂದಣಿ ಕ್ರಮೇಣ ಕರಗಿ<br /></span><span style="font-size:130%;color:#000066;">ಪಾರ್ಕಿನಲ್ಲಿ ನೀರವ ಮೌನ ಆವರಿಸಿಕೊಳ್ಳುತ್ತದೆ. ಹಾಗೆಂದು ಈಗ ಪಾರ್ಕು ಬಿಡುವಾಯಿತೆಂದುಕೊಳ್ಳಬೇಡಿ! ದೂರದೂರಿಂದ ಹೊರಟು ಸೇರಬೇಕಾದ ಸ್ಠಳ ಸೇರಲಾಗದವರಿಗೆ; ದಿನವಿಡೀ ಅಲೆದು ದಣಿದ ಭಿಕ್ಷುಕರಿಗೆ ಆ ರಾತ್ರಿಯ ಸುಪ್ಪತ್ತಿಗೆಯಾಗುತ್ತದೆ ಪಾರ್ಕು. </span><br /><span style="font-size:130%;color:#000066;"></span><br /><span style="font-size:130%;color:#000066;"><span style="font-size:180%;">ಇ</span>ಷ್ಟಾದರೂ ಪಾರ್ಕಿನ ಗಿಡ ಮರಗಳ ದನಿಗೆ ಕಿವಿಯಾಗುವ ವ್ಯವಧಾನ ಪಾರ್ಕಿನ ಮಾಲಿಯಿಂದ ಹಿಡಿದು ನಿತ್ಯ ಬರುವ ವಯೋ ವೃಧ್ದರವರೆಗೆ ಯಾರೋಬ್ಬರಿಗೂ ಇಲ್ಲ! ಹಾಗಾಗಿ ಅಲ್ಲಿನ ಗಿಡಮರಗಳೆಲ್ಲ ಸದಾ ಎಲೆಯುದುರುವ ಕಾಲದ ಪ್ರತೀಕ್ಷೆಯಲ್ಲಿರುತ್ತವೆ - ಬೇಡವಾದ ಗರ್ಭ ಹೊತ್ತ ದಿನ ತುಂಬದ ಬಸುರಿಯೊಬ್ಬಳು ಪ್ರಸವಕ್ಕೆ ನಿರೀಕ್ಷಿಸುವಂತೆ...!</span>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com8tag:blogger.com,1999:blog-217924085175002471.post-31888301845472866572008-10-12T02:34:00.000-07:002008-10-13T04:36:08.610-07:00ಜಟಕಾ ಕುದುರೆ ಹತ್ತಿ ದಸ್ರಾ ನೊಡುಮಾ....<a href="https://blogger.googleusercontent.com/img/b/R29vZ2xl/AVvXsEjoHqGbhoYHXbdn7uDN2AFarzywVNlUT52YW6a39VX2yc1BPdg6BeREluNggmaglN-WmwxnU4YXBpFN8bO6RS8UEPulogWEDBC25cFUtbPaXC4erFQjq2h7RAu-hX_LBKmWP4RV13omjEJy/s1600-h/howda.jpg"></a><br /><div><div><div><div><div><a href="https://blogger.googleusercontent.com/img/b/R29vZ2xl/AVvXsEgeQZ_X3jSaIjs0klG-Wme5AzgyfsrmFT1YE0bC2Fcrobmnk55KjLIIRYbSFYf7ZUOK-Lktph0Z8N86q-iGVZ5Dmne7bK1UOfXTlhgG477J4edBwck4rt5mNbxAZNPs-0kV60cxWE7srW9L/s1600-h/mysoredasara.jpg"><img id="BLOGGER_PHOTO_ID_5256200134350424626" style="FLOAT: left; MARGIN: 0px 10px 10px 0px; CURSOR: hand" alt="" src="https://blogger.googleusercontent.com/img/b/R29vZ2xl/AVvXsEgeQZ_X3jSaIjs0klG-Wme5AzgyfsrmFT1YE0bC2Fcrobmnk55KjLIIRYbSFYf7ZUOK-Lktph0Z8N86q-iGVZ5Dmne7bK1UOfXTlhgG477J4edBwck4rt5mNbxAZNPs-0kV60cxWE7srW9L/s320/mysoredasara.jpg" border="0" /></a><br /><br /><br /><br /></div><br /><br /><div align="left"><span style="font-size:130%;"><strong><span style="color:#cc0000;">'ಶೋಭಾ'</span><span style="color:#ff6600;">ಯಮಾನ ದಸರಾ ಸುತ್ತ</span></strong></span><span style="color:#ff6600;"> ....</span></div><br /><div><br /></div><div><br /><span style="color:#660000;"><span style="font-size:130%;">ಮೆ</span>ಲುಕು ಹಾಕುವಂತಹ ಹತ್ತಾರು ಸಿಹಿ ನೆನಪು ಹಾಗೂ ಕೆಲವಾರು ಕಹಿ ನೆನಪುಗಳೊಂದಿಗೆ ಈ ಬಾರಿಯ ದಸರಾಗೆ ತೆರೆ ಬಿದ್ದಿದೆ. ಮೊಟ್ಟಮೊದಲಿಗೆ ನೆಮ್ಮದಿಯ ನಿಟ್ಟುಸಿರಿಟ್ಟವರೆಂದರೆ ಪೋಲೀಸರು.! ಉಗ್ರರ ಧಾಳಿಯ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಇತಿಹಾಸದಲ್ಲೇ ಅತೀ ಎನ್ನುವಷ್ಟು </span><span style="color:#660000;">ಪೋಲೀಸರು ನಿಯೋಜಿತರಾಗಿದ್ದರು. </span><br /><span style="color:#660000;"><span style="font-size:130%;">ಆ</span>ರಂಭದ ದಿನಗಳಲ್ಲಿ ದಸರಾ ಅಖಾಡ ಖಾಲಿ ಕಂಡುಬಂದರೂ ನಂತರ ಜನ ಪ್ರವಾಹದ ಹರಿವು ಜೋರಾಗಿತ್ತು. ದಸರಾ ಕಾರ್ಯಕ್ರಮ ಉಗ್ರರ ಹಿಟ್ ಲಿಸ್ಟಿನಲ್ಲಿದ್ದರೂ ಜನ ಹೆದರದೆ "ಜೈ ಚಾಮುಂಡಿ" ಎಂದು ಜಂಬೂ ಸವಾರಿ ನೋಡಲು ಜಮಾಯಿಸಿದ್ದರು. </span></div></div><div><div align="left"><span style="color:#660000;"><span style="font-size:130%;">ಮೆ</span>ರವಣಿಗೆ ವೀಕ್ಷಿಸಲು ಪಾಸ್ ಗಿಟ್ಟಿಸಿದವರದ್ದು ಒಂದು ರೀತಿಯ ಗೋಳಾದರೆ ಪಾಸ್ ರಹಿತರು ಕೊನೆ ಕ್ಷಣಗಳವರೆಗೂ ಪಾಸ್ ಪಡೆಯಲು ಪರದಾಡಿ ಸೋತು ಹಿಂತಿರುಗಿದರು. ಈ ಬಾರಿ ಪಾಸ್ ವಿತರಣೆ ಮಿತಿಯಲ್ಲಿದ್ದ ಕಾರಣ ಈ ದ್ರುಷ್ಯ ಸಾಮಾನ್ಯವಾಗಿತ್ತು. ಆದ್ರೂ ನಕಲಿ ಪಾಸ್ ವೀರರಿಗೇನೂ ಇದರಿಂದ ಲಾಸ್ ಆಗಲಿಲ್ಲ. ಮುನ್ನಾ ದಿನದಂದೇ ಪರ ಊರಿನ "ಮಿಕ"ಗಳನ್ನು ಹುಡುಕಿ ನಕಲಿ ಪಾಸ್ ನೀಡಿ ಹಣ ಪೀಕಿ ಫೇರಿ ಕಿತ್ತಿದ್ದರು!! ಕೊನೆಯಲ್ಲಿ ಅಸಲಿ - ನಕಲಿ ಪಾಸುದಾರರನ್ನು ನಿಭಾಯಿಸುವಲ್ಲಿ ಪರದಾಡಿದವರು ಪೋಲೀಸರು. </span><br /></div><div align="left"><span style="color:#660000;"><span style="font-size:130%;">ದ</span>ಸರಾ ಮೆರವಣಿಗೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾಗವಹಿಸಿದ್ದ ಯುದ್ಧ ಟ್ಯಾಂಕರ್ ಗಳು, ತೇಜಸ್ ಯುದ್ಧ ವಿಮಾನ ಮೆರವಣಿಗೆಗೆ ಮೆರಗು ನೀಡಿದ್ದು ಬಿಟ್ಟರೆ ಬಹುತೇಕ ಸ್ತಬ್ಧ ಚಿತ್ರಗಳು ನಿರಾಸೆ ಹುಟ್ಟಿಸಿದವು. ಅಲಂಕೃತ ಅಂಬಾರಿಯನ್ನು ಹೊತ್ತ ಬಲರಾಮ ರೇವತಿ ಸರಳರೊಂದಿಗೆ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಬೀಳುತ್ತಿದ್ದ ಬಿರು ಬಿಸಿಲನ್ನೂ ಲೆಕ್ಕಿಸದೆ ಜನ ಬೆಳಿಗಿನಿಂದಲೇ ಕಾದು ಕೂತು ಮೆರವಣಿಗೆ ನೋಡಿದರು. </span><br /></div><div align="left"><span style="color:#660000;"><span style="font-size:130%;">ಜಂ</span>ಬೂ ಸವಾರಿಗೂ ಮುಂಚಿನ ದಿನಗಳೂ ಕೂಡ ಕಾರ್ಯಕ್ರಮಗಳ ಭರಾಟೆ ಜೋರಾಗೇ ಇತ್ತು. ಈ ಬಾರಿಯ ಹೊಸ ಸೇರ್ಪಡೆಗಳೆನಿಸಿದ ರೈತ ದಸರಾ, ಗ್ರಾಮೀಣ ದಸರಾ ಹಾಗೂ ಜನಪದೋತ್ಸವಗಳು ಉತ್ತಮ ಆರಂಭವನ್ನು ಸೂಚಿಸಿದವು. ಗೋಲ್ಡ್ ಕಾರ್ಡ್ ಹೋಲ್ಡರ್ ಗಳಿಗೆ ಎಲ್ಲ ಕಾರ್ಯಕ್ರಮಗಳಿಗೂ ಸ್ಥಳ ಕಾಯ್ದಿರಿಸಲಾಗಿತ್ತಾದರೂ ಯಾವುದಕ್ಕೆ ಹೋಗಬೇಕೆಂಬ ಗೋಜಲಿನಿಂದ ಕೊನೆಗೆ ಖಾಲಿ ಉಳಿದದ್ದು ಅರಮನೆ ಮುಂಭಾಗದ ಖುರ್ಚಿಗಳು.!! </span><br /></div><div align="left"><span style="color:#660000;"><span style="font-size:130%;">ಕ</span>ಳೆದ ಬಾರಿ ವರುಣನ ಮುನಿಸಿನಿಂದ ಮಸುಕಾಗಿದ್ದ 'ಏರ್ ಷೋ' ಈ ಬಾರಿ ಸಾಂಗವಾಗಿ ನಡೆಯಿತು.ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿಕ್ಕಿ ಮೆರೆಯುತ್ತಿದ್ದ ಯುವದಸರಾ ಕಾರ್ಯಕ್ರಮಕ್ಕೆ ಸ್ವಲ್ಪ ಅಂಕುಶ ಬಿದ್ದಿತ್ತಾದರೂ "ಯುವಶಕ್ತಿ"(!) ಅದರಿಂದ ನಿರಾಶರಾಗಲಿಲ್ಲ. ಯುವ ದಸರಾದಲ್ಲಿ ಶಿವಮಣಿಯ ಡ್ರಮ್ಸ್; ರಾಜೇಶ್ ಕೃಷ್ಣನ್ ಸಾಂಗ್ಸ್ ಮೋಡಿಗೆ ಮರುಳಾದ ಪೋಲೀಸರೂ "ಈ ಯುನಿಫಾರ್ಮ್ ಇಲ್ದಿದ್ರೆ ನಾವೂ ನಾಲ್ಕು ಸ್ಟೆಪ್ ಹಾಕ್ಬಹುದಿತ್ರೀ" ಎಂದು ಮರುಗಿದರು! </span><br /></div><div align="left"><span style="color:#660000;"><span style="font-size:130%;">ಇ</span>ತರೆಡೆ ನೆಡೆದ ಸಂಗೀತ, ಭರತನಾಟ್ಯಗಳಂತಹ ಕಾರ್ಯಕ್ರಮಗಳಿಗೆ ಒಂದು ವರ್ಗದ ಪ್ರೇಕ್ಷಕರ ಹಾಜರಾತಿ ಮಾತ್ರ ಇತ್ತು. ರಂಗಾಯಣದಲ್ಲಿ ನಡೆದ ನವರಾತ್ರಿ ರಂಗೋತ್ಸವದಲ್ಲಿ ವೈವಿಧ್ಯಮಯ ನಾಟಕಗಳು ಪ್ರದರ್ಶಿಸಲ್ಪಟ್ಟವಾದರೂ; ಎರಡನೆ ಪ್ರದರ್ಶನದಲ್ಲಿ ನಟರು ಜೋಷ್ ಕಳೆದುಕೊಂಡವರಂತೆ ಕಂಡುಬಂದರು. </span><br /></div><div align="left"><span style="color:#660000;"><span style="font-size:130%;">ಜಿ</span>ಲ್ಲಾ ಉಸ್ತುವಾರಿ ಸಚಿವರಾದ ಶೋಭಾ ಕರಂದ್ಲಾಜೆ ಆರಂಭದಲ್ಲಿ ಸಿದ್ಧತೆಗಳನ್ನು ಉದ್ಯಾನ ನಗರಿಯಲ್ಲಿಯೇ ಪ್ರಾರಂಭಿಸಿದರಾದರೂ ವ್ಯವಸ್ಥೆ ಹದಗೆಡುತ್ತಿರುವುದನ್ನು ಮನಗಂಡು ಅರಮನೆ ನಗರಿಯಲ್ಲಿಯೇ ಮೊಕ್ಕಾಂ ಮಾಡಿ ಅಧಿಕಾರಿಗಳಿಂದ ಕೆಲಸ ತೆಗೆಸಿದರು. ಇಲ್ಲದಿದ್ದರೆ ಅವ್ಯವಸ್ಥೆ ಮೇರೆ ಮೀರುತ್ತಿತ್ತು. ದಸರಾದುದ್ದಕ್ಕೂ ಸಚಿವರ ಮಿಂಚಿನ ಸಂಚಾರ ಅಧಿಕಾರಿಗಳಲ್ಲಿ ಚುರುಕು ಮೂಡಿಸಿ ಕೆಲಸಗಳು ಸಾಂಗವಾಗಿ ನಡೆಯುವಂತಾಯಿತು. ಅಷ್ಟಾಗಿಯೂ ಕೆಲವರು ಒಲ್ಲದ ಗಂಡಂದಿರಾಗಿ ಮೊಸರಲ್ಲಿ ಕಲ್ಲು ಹುಡುಕಿದರು. ಒಟ್ಟಾರೆಯಾಗಿ ದಸರಾ ಅಚ್ಚುಕಟ್ಟಾಗಿ ನಡೆಯಿತು. ದೇಶ ವಿದೇಶಗಳಿಂದ ಬಂದವರು ದಿಲ್ ಖುಷ್ ಆದರು. ಮೈಸೂರಿನವ್ರಾಗಿದ್ದೂ 'ನಾನಾ ಕಾರಣ'ಗಳಿಂದ ದಸರಾ ತಪ್ಪಿಸಿಕೊಂಡವರು ಮರುದಿನ ಎದ್ದು ಮರುಗಿದರು..!!!! </span></div><div align="left"><span style="color:#660000;"></span> </div><div align="left"> </div><div align="left"><span style="color:#660000;"></span></div><div align="left"><span style="color:#660000;"></span></div><div align="left"><span style="color:#660000;">ಚಿತ್ರ ಕೃಪೆ: ಇಂಟರ್ನೆಟ್.</span></div></div></div></div></div>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com1tag:blogger.com,1999:blog-217924085175002471.post-67381186477663534262008-10-04T22:33:00.000-07:002008-10-05T00:01:04.379-07:00ಹಿಂದಿನ ಬೆಂಚಿನ ಹುಡುಗರು ನಾವು.....<span style="color:#006600;"><span style="font-size:180%;">ಅ</span><span style="font-size:130%;">ದೇಕೋ ಗೊತ್ತಿಲ್ಲ,ಶಾಲಾ ಕಾಲೇಜು ದಿನಗಳಲ್ಲಿ ಹಿಂದಿನ ಬೆಂಚಿನಲ್ಲಿ ಕೂರುತ್ತಿದ್ದುದನ್ನು ನೆನಪಿಸಿಕೊಂಡು ಪುಳಕಿತರಾಗುವುದರಲ್ಲೂ ಒಂಥರಾ ಸೊಗಸಿದೆ ! ಕಾಲೇಜು ದಿನಗಳಲ್ಲಿ ಕೊನೆ ಬೆಂಚಿನಲ್ಲಿ ಕುಳಿತುಕೊಂಡು ಮಾಡುತ್ತಿದ್ದ ಕೀಟಲೆ, ತಥಾಕಥಿತ ಉಪನ್ಯಾಸಕರಿಗೆ ನೀಡುತ್ತಿದ್ದ ಕೋಟಲೆಗಳನ್ನು ನೆನಸಿಕೊಂಡರೆ ಮನಸಿಗೆ ಈಗಲೂ ರೋಮಾಂಚನದ ವರ್ಷಧಾರೆ.</span></span><span style="font-size:130%;"><br /></span><span style="color:#006600;"></span><br /><span style="color:#006600;"><span style="font-size:180%;">ಹೈ</span><span style="font-size:130%;">ಸ್ಕೂಲು ಸೇರಿದಾಗಲೇ ಹಿಂದಿನ ಬೆಂಚಿನಲ್ಲಿ ಆಸೀನನಾಗಬೇಕೆಂಬ ಮಹದಾಸೆ ನನಗಿತ್ತಾದರೂ; ಪಿಟಿ ಮಾಸ್ಟರ್ ಮುಂದಾಳತ್ವದಲ್ಲಿ ಹೈಟು ಪ್ರಕಾರ ಸೀಟು ಹಂಚಿಕೆಯಾಗುತ್ತಿತ್ತಾದ್ದರಿಂದ ಅದು ಸಾಧ್ಯವಾಗಲ್ಲಿಲ್ಲ. ಮೂರು ವರ್ಷ ಮುಂದಿನ ಬೆಂಚಿನಲ್ಲಿ ಕುಳಿತೇ ಕಳೆಯಬೇಕಾಯಿತು. ಆದರೂ ಅವಕಾಶ ಸಿಕ್ಕಾಗಲೆಲ್ಲ ಹಿಂದಿನ ಬೆಂಚಿನಲ್ಲಿ ಕುಳಿತು ಇಡೀ ತರಗತಿಯನ್ನು 'ಅವಲೋಕಿಸುವ' ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.</span></span><span style="font-size:130%;"><br /><span style="color:#006600;"></span><br /></span><span style="color:#006600;"><span style="font-size:180%;">ಪಿ</span><span style="font-size:130%;">ಯುಸಿಗೆ ಬಂದಮೇಲೆ ಕ್ಲಾಸುರೂಮೆಂಬುದು ನಮ್ಮ ಸ್ವಂತ ಸಾಮ್ರಾಜ್ಯವೆಂಬಂತಾಗಿಹೋಗಿತ್ತು. ನಮ್ಮ ಸೆಕ್ಷನ್ನಿನಲ್ಲಿ ಇದ್ದಿದ್ದು ಬರೋಬ್ಬರಿ ೧೨೦ ಜನ ! ನಾನು ಸ್ವಲ್ಪ ಕಡಿಮೆ ಎತ್ತರದವನಾದ್ದರಿಂದ ಲಾಸ್ಟ್ ಬೆಂಚಿನಲ್ಲಿ ಕುಳಿತರೆ ಲೆಕ್ಚರರುಗಳಿಗೆ ಕಾಣಿಸುತ್ತಲೇ ಇರಲಿಲ್ಲ. ಹೊಸ ಉಪನ್ಯಾಸಕರ ಆಗಮನವಾಯಿತೆಂದರೆ ನಮ್ಮ ರಾಕೆಟ್ ಧಾಳಿ ಆರಂಭವಾಗಿಬಿಡುತ್ತಿತ್ತು. ಹೈಸ್ಕೂಲಿನಲ್ಲಿ ಬರೆದು ಮುಗಿಸಿದ ನೋಟ್ ಪುಸ್ತಕದ ಹಾಳೆಗಳೆಲ್ಲ ರಾಕೆಟ್ ಆಗಿ ಮರುಬಳಕೆಯಾಗುತ್ತಿದ್ದವು. ಇನ್ನು ಕೆಲ ಲೆಕ್ಚರರ್ ಗಳ ಮೇಲೆ ಪ್ರಶ್ನೆಗಳ ಸುರಿಮಳೆ. ನಮ್ಮ ಈ ಉಪಟಳಗಳನ್ನು ಸಹಿಸಲಾಗದೆ ಕೆಲವರು ಬೇರೆ ಸೆಕ್ಷನ್ನಿಗೆ ಬದಲಾಯಿಸಿಕೊಂಡಿದ್ದುಂಟು. ಈ ಕೀ (ಕೋ)ಟಲೆಗಳೆಲ್ಲ ಬೋರಾದರೆ ಬಿಟ್ಟ ಕಣ್ಣು ಬಿಟ್ಟಂತೆಯೇ ನಿದ್ರಾದೇವಿಗೆ ಶರಣಾಗಿಬಿಡುತ್ತಿದ್ದೆವು.</span></span><span style="font-size:130%;"><br /><span style="color:#006600;"></span><br /></span><span style="color:#006600;"><span style="font-size:180%;">ಡಿ</span><span style="font-size:130%;">ಗ್ರಿಯಲ್ಲಿ ಹಿಂದಿನ ಬೆಂಚು ಸಿಗಲಿಲ್ಲವಾದರೂ ಅಲ್ಲಿದ್ದು ಮಾಡುವ ಕೆಲಸವನ್ನು ಮುಂದಿನ ಬೆಂಚಿನಲ್ಲಿದ್ದುಕೊಂಡೇ ಮಾಡುತ್ತಿದ್ದೆವು.! ಆದರೆ ಅದರಲ್ಲಿ ಹೆಚ್ಚಿನ ಸಮಯವನ್ನು ನಿದ್ರಾದೇವಿ ನುಂಗಿಬಿಡುತ್ತಿದ್ದಳು. ನಾನಂತೂ ಉಡುಪಿ ಮಠದಲ್ಲಿ ಗಡದ್ದಾಗಿ ಪೋಣಿಸಿ ಕ್ಲಾಸಿಗೆ ಹೋಗುತ್ತಿದ್ದೆನಾದ್ದರಿಂದ ಮಧ್ಯಾಹ್ನದ ಅವಧಿಯೆಂದರೆ ನಿದ್ರಾದೇವಿಯ ಉಪಾಸನೆಯೇ ಆಗಿತ್ತು. ಆದರೂ ಒಮ್ಮೆಯೂ ಲೆಕ್ಚರರುಗಳ ಕೈಯಲ್ಲಿ ಸಿಕ್ಕಿಬಿದ್ದುದಿಲ್ಲ. ಇದು ನಮ್ಮ ಕ್ಲಾಸಿನ ಹುಡುಗಿಯರಿಗೂ ಉತ್ತರ ಸಿಗದ ಒಗಟಾಗಿತ್ತು. ಹೀಗೆಂದು ಹುಡುಗಿಯೊಬ್ಬಳು ಕೊನೆ ವರ್ಷ ಆಟೋಗ್ರಾಫ್ ನಲ್ಲಿ ಬರೆದೂ ಬಿಟ್ಟಿದ್ದಳು.!ವಾಸ್ತವವೆಂದರೆ, ನನ್ನ ಸ್ಕೋರ್ ಗ್ರಾಫ್ ಯಾವಾಗಲೂ ಎಪ್ಪತ್ತೈದರ ಮೇಲಿರುತ್ತಿದ್ದುದರಿಂದ ಹಾಗೂ ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲಿ ನನ್ನ 'ಕೈವಾಡ' ವಿರುತ್ತಿದ್ದರಿಂದ ಇದಕ್ಕೆಲ್ಲ ನನಗೆ ಕೊಂಚ ವಿನಾಯ್ತಿಯಿತ್ತು.</span></span><span style="font-size:130%;"><br /></span><span style="color:#006600;"><span style="font-size:180%;">ಡಿ</span><span style="font-size:130%;">ಗ್ರಿ ಮುಗಿಸಿ ವರ್ಷಗಳೇ ಕಳೆದಿದ್ದರೂ ಈಗಲೂ ಕಾಲೇಜಿಗೆ ಹೋಗುವವರನ್ನು ಕಂಡಾಗ ಹಿಂದಿನ ಬೆಂಚಿನ ನೆನಪು ಮರುಕಳಿಸಿ ಮುದ ನೀಡುತ್ತದೆ. </span></span>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com4tag:blogger.com,1999:blog-217924085175002471.post-64199568749549429462008-09-17T04:23:00.000-07:002008-09-27T22:26:31.887-07:00ಜ್ವಾಪಾನ ರಾತ್ರಿಯಾತು..<p class="MsoNormal" style="MARGIN: 0in 0in 0pt" align="center"><span style="mso-spacerun: yes;font-size:130%;" ></span></p><p class="MsoNormal" style="MARGIN: 0in 0in 0pt"><span style="font-size:130%;"><?xml:namespace prefix = o ns = "urn:schemas-microsoft-com:office:office" /><o:p></o:p></span></p><p class="MsoNormal" style="MARGIN: 0in 0in 0pt"><span style="font-size:130%;"><span ><span style="color:#660000;"><span style="font-size:180%;">ನಾ</span>ನು ರಾತ್ರಿ...... ಹಗಲಿಡೀ ದುಡಿದು ದಣಿದವರ ಪಾಲಿಗೆ ಶಾಂತಿ,ವಿಶ್ರಾಂತಿ ನೀಡುವ ಸಮಯವಾದರೆ,ದುಡಿಮೆ ಹುಡುಕಿ ದಣಿದವರು,ದುಡಿಯ ಹೊರಟು ಸೋತವರು ಹಗಲಿಡೀ ಧರಿಸಿದ ಮುಖವಾಡ ಕಳಚಿಟ್ಟು ನಿರುಮ್ಮಳವಾಗುವ ಅಮೃತಘಳಿಗೆ. "ಬೆಳಕಿಗೆ" ಬಾರದವರು ತುತ್ತಿನ ಚೀಲ ತುಂಬಿಸಿಕೊಳ್ಳುವ ಪರ್ವಕಾಲ. ಬೆಳಕು ನೀಡುತ್ತೇವೆಂದು ಬೀಗುವವರ ಕತ್ತಲೆಯ ವ್ಯವಹಾರ ನಡೆಯುವ ಸಂಧಿ ಸಮಯ. ಅಸಂಖ್ಯಾತ ನೋವು, ನಿಟ್ಟುಸಿರು, ನಿರಾಸೆಗಳನ್ನು ನನ್ನ ಗೂಢ ಗರ್ಭದೊಳಕ್ಕೆ ಸೆಳೆದು ಸಾಯಿಸುವ ದುಶ್ಟ ಸಮಯ.</span><span style="color:#660000;"> </span></span></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span ></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="color:#660000;"><span style="font-size:130%;"><o:p></o:p></span></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"><strong></strong></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"><span ><span style="font-size:180%;">ನಾ</span>ನು ರಾತ್ರಿ..... ಬೆಳಕು ಬೆನ್ನಿಗೇ ಇದ್ದರೂ ಎಂದೆಂದೂ ಸಂಧಿಸಲಾಗದ ದುರ್ದೈವಿ. ಬಾನಲ್ಲಿ ಬೆಳ್ಳಿ ಕಿರಣ ಕಾಣುತ್ತಿದ್ದಂತೆ ಓಡಿ ಮರೆಯಾಗುವ ಮುಖೇಡಿ. ನೀವು ಹಚ್ಚುವ ದೀಪಕ್ಕೆ ಅರೆನಗ್ನಗೊಳ್ಳುವ ಲಜ್ಜೆಗೇಡಿ.ಸೂರ್ಯ ಮುಳುಗಿದ ಕೂಡಲೇ ಕಳ್ಳಹೆಜ್ಜೆ ಇಟ್ಟು ಬರುವ ಕರಾಳ ವದನ.</span></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"><o:p></o:p></span></p><p class="MsoNormal" style="MARGIN: 0in 0in 0pt"><span style="color:#660000;"><span style="font-size:130%;"></span></span></p><p class="MsoNormal" style="MARGIN: 0in 0in 0pt"><span style="color:#660000;"><span style="font-size:130%;"><span ><span style="font-size:180%;">ನಿ</span>ಜವಾಗಿಯೂ ಪಾಪಿ (ರಾತ್ರಿ) ಚಿರಾಯು. ಪ್ರಪಂಚದಲ್ಲಿ ಬೆಳಕಿರುವವರೆಗೂ ನನಗೂ ಪೂರ್ಣ ಆಯಸ್ಸು. ಆದರೂ ಬೆಳಕಿಗಿಂತ ನಾನೇ ಎಲ್ಲರಿಗೂ ಇಶ್ಟ. ಇದಕ್ಕೆ ಶಿಶ್ಟರು - ದುಶ್ಟರೆಂಬ ಭೇದವಿಲ್ಲ. ಶಿಶ್ಟರು ಉಂಡಿದ್ದನ್ನು ಅರಗಿಸಿಕೊಳ್ಳುವ ಕಾಲವಾದರೆ ದುಶ್ಟರು ಕರಗಿಸಿದ್ದನ್ನು ಮತ್ತೆ ಗಳಿಸುವ ಕಾಲ. ಒಟ್ಟಿನಲ್ಲಿ ರೂಪ ಕರಾಳವಾದರೂ ಎಲ್ಲರ ಪ್ರೀತಿ ನನಗೆ ಹೇ(ಧಾ)ರಾಳ.</span></span></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="color:#660000;"><span style="font-size:130%;"><o:p></o:p></span></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="color:#660000;"><span style="font-size:130%;"><span ><span style="font-size:180%;">ಕೆ</span>ಲವರಿಗೆ ನಾನೆಂದರೆ ಎಲ್ಲಿಲ್ಲದ ಭಯ.ಇನ್ನು ಕೆಲವರಿಗೆ ( ಅವರ ಭಯ ಪಕ್ಕದವರಿಗೆ ಕಾಣಿಸದಂತೆ ಕಾಯುತ್ತೇನಲ್ಲ ಹಾಗಾಗಿ) ಧೈರ್ಯ. ಆದರೂ ನಾನು ಬರುವ ಸಮಯವಾಗುತ್ತಿದ್ದಂತೆ ಎಂಥ ಧೈರ್ಯಸ್ಥನೂ ತನಗೆ ತಾನೇ ಎಚ್ಚರಿಸಿಕೊಳ್ಳುತ್ತಾನೆ; ಜ್ವಾಪಾನ ರಾತ್ರಿಯಾತು.. </span></span></span></p><p class="MsoNormal" style="MARGIN: 0in 0in 0pt"> </p><p class="MsoNormal" style="MARGIN: 0in 0in 0pt"><span ></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span ></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span ></span></p><p class="MsoNormal" style="MARGIN: 0in 0in 0pt"><span ></span></p><p class="MsoNormal" style="MARGIN: 0in 0in 0pt"><span ></span></p><p class="MsoNormal" style="MARGIN: 0in 0in 0pt"><span style="font-size:130%;color:#660000;"></span></p><p class="MsoNormal" style="MARGIN: 0in 0in 0pt"><span style="font-size:130%;"></span></p><p class="MsoNormal" style="MARGIN: 0in 0in 0pt"><span style="font-size:130%;"></span></p><p class="MsoNormal" style="MARGIN: 0in 0in 0pt"><strong><span style="font-size:130%;"></span></strong></p><p class="MsoNormal" style="MARGIN: 0in 0in 0pt"><strong><span style="font-size:130%;"></span></strong></p><p class="MsoNormal" style="MARGIN: 0in 0in 0pt"><span style="font-size:130%;"><o:p><strong></strong></o:p></span></p><p class="MsoNormal" style="MARGIN: 0in 0in 0pt"><span style="font-size:130%;"><o:p></o:p></span></p><p class="MsoNormal" style="MARGIN: 0in 0in 0pt"><span style="mso-spacerun: yes;font-size:130%;" ></span></p><p class="MsoNormal" style="MARGIN: 0in 0in 0pt"><span style="font-size:130%;"><o:p></o:p></span></p><p class="MsoNormal" style="MARGIN: 0in 0in 0pt"><span style="font-size:130%;"><strong></strong></span><p class="MsoNormal" style="MARGIN: 0in 0in 0pt"><span style="font-size:130%;"><span ><strong>ಟಿಪ್ಪಣಿ: ೧೯-೧೨-೨೦೦೭ರ "ವಿಜಯ ಕರ್ನಾಟಕ" ಮೈಸೂರು ಆವ್ರುತ್ತಿಯ "ರೂಪಕ" ಪುರವಣಿಯಲ್ಲಿ ಪ್ರಕಟವಾದ ಲೇಖನ.</strong> </span></span></p><p class="MsoNormal" style="MARGIN: 0in 0in 0pt"><span style="font-size:130%;"><o:p></o:p></span></p><br /><p><span style="font-size:130%;"></span></p>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com1tag:blogger.com,1999:blog-217924085175002471.post-83680320086770174472008-09-16T01:56:00.000-07:002008-09-16T02:12:26.092-07:00ಬ್ಲಾಗಿನೊಳು ಬಂದಿಹೆನು ಕೈ ಮುಗಿದು ನಿಂದಿಹೆನು<p><span style="color:#993300;"><strong><span style="color:#ff6600;">ಪ್ರಿಯ ಓದುಗರೇ ಮತ್ತು ಬ್ಲಾಗಿಗರೇ</span>,</strong></span></p><p><span style="color:#993300;"><strong></strong><br /></span><span style="font-size:100%;color:#330000;"><span style="font-size:130%;">ಈವರೆಗೆ ವಿವಿಧ ನಲ್ದಾಣಗಳನ್ನು ಹೊಕ್ಕು ಬರಹಗಳ ಸವಿಯನ್ನು ಸವಿಯುತ್ತಿದ್ದ ನಾನು ಇಂದು ಈ ಬ್ಲಾಗೆಂಬ ಮಹಾಮನೆಗೆ ಹೊಸ ಸದಸ್ಯನಾಗಿ ಸೇರ್ಪಡೆಗೊಂಡಿದ್ದೇನೆ.<br />ಮನಸ್ಸೆಂಬ ಮಹಾ ಸಾಗರದಲ್ಲೇಳುವ ಉನ್ಮತ್ತ ಅಲೆಗಳನ್ನು ತಣಿಸಿ ಮಣಿಸಲು ನಾನು ಕಂಡುಕೊಂಡಿರುವ ಮಾರ್ಗ ಬರವಣಿಗೆ. ಹಾಗೆಂದು ನಾನು ಭಯಂಕರ ಬರಹಗಾರನೇನಲ್ಲ! ಎಲ್ಲೋ ಆಗೀಗ ತೋಚಿದ್ದನ್ನೇ ಗೀಚುವ ಹವ್ಯಾಸವಿದೆ. ಕೆಲ ಸಮಯ ಮಾಸಪತ್ರಿಕೆಯೊಂದರಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ್ದರಿಂದ ನನ್ನ ಓತಪ್ರೋತವಾದ ಬರವಣಿಗೆಗೆ ಒಂದು ಚೌಕಟ್ಟು ಸಿಕ್ಕಿದೆ.<br />‘ನಡೆವವರೆಡವದೆ ಕುಳಿತವರೆಡಹುವರೆ?’ ಎಂಬ ಮಾತಿನಲ್ಲಿ ನಂಬಿಕೆ ನನಗೆ. ಕುಳಿತು ಕೊಳೆಯುವುದಕ್ಕಿಂತ ಎಡವಿದರೂ ಎದ್ದು ನಡೆಯುತ್ತಿದ್ದರೆ ಇಂದಲ್ಲ ನಾಳೆ ಯಾವುದೋ ಗಮ್ಯವನ್ನಂತೂ ತಲುಪುತ್ತೇವೆ ಅಲ್ವಾ? ಹಾಗೆಂದುಕೊಂಡೇ “ಇಂಚರ”ದ ಮೂಲಕ ಹೊಸ ನಡಿಗೆಯೊಂದನ್ನು ಪ್ರಾರಂಭಿಸಿದ್ದೇನೆ. ಇಂಚರದ ಶ್ರುತಿ ಲಯ ತಾಳಗಳಲ್ಲಿ ವ್ಯತ್ಯಾಸವಾದರೆ ಸರಿಪಡಿಸಲು ಹಿರಿಯರೂ ಘಟಾನುಘಟಿಗಳೂ ಆದ ನೀವೆಲ್ಲಾ ಇದ್ದೀರಿ! ‘ಇವನಾರವ, ಇವನೆಷ್ಟರವ’ ಎಂದೆಣಿಸದೆ ‘ಇವ ನಮ್ಮವ, ಇವ ನಮ್ಮವ ಎಂದೆಣಿಸಿ ಸಲಹೆ, ಸಹಕಾರ ನೀಡಬೇಕೆಂದು ಕೇಳುತ್ತಾ ಭಾವ ನಾವೆಯಲಿ ದೂರ ತೀರದ ಯಾನವನ್ನು ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆ ಇರಲಿ.</span><br /></span><span style="font-size:130%;color:#ff0000;"><strong>ನಿಮ್ಮವ,<br />ರಾಘವೇಂದ್ರ ಕೆಸವಿನಮನೆ.</strong></span></p>ರಾಘವೇಂದ್ರ ಕೆಸವಿನಮನೆ.http://www.blogger.com/profile/14423848174720716195noreply@blogger.com4